ಕಾಸರಗೋಡು: ನೆಕ್ರಾಜೆ ಸಂತಾನ ಗೋಪಾಲಕೃಷ್ಣ ದೇವಾಲಯದ ಫೇಸ್ಬುಕ್ ಅಕೌಂಟ್ಗೆ ಚಾಲನೆ ನೀಡಲಾಗಿದೆ. ಮೇ 7ರಿಂದ 15ರವರೆಗೆ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಪ್ರಚಾರ ಸಮಿತಿ ವತಿಯಿಂದ ಫೇಸ್ಬುಕ್ ಖಾತೆ ಆರಂಭಿಸಲಾಗಿದೆ. ‘ಶ್ರೀ ಕ್ಷೇತ್ರ ನೆಕ್ರಾಜೆ’ ಹೆಸರಿನ ಈ ಖಾತೆಯಲ್ಲಿ ದೇವಾಲಯದ ಎಲ್ಲ ಚಟುವಟಿಕೆಗಳ ಮಾಹಿತಿ, ಚಿತ್ರಗಳು, ವಿಡಿಯೊಗಳು ಲಭ್ಯ ಇವೆ.
ಎಡನೀರು ಮಠದಲ್ಲಿ ಗುರುವಾರ ಈ ಸಂಬಂಧ ಜರುಗಿದ ಕಾರ್ಯಕ್ರಮದಲ್ಲಿ ಎಡನೀರು ಮಠಾಧೀಶ ಸಚ್ಚಿದಾನಂದ ಭಾರತಿ ಸ್ವಾಮೀಜಿ ಚಾಲನೆ ನೀಡಿದರು. ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಅಖೀಲೇಶ್ ನಗುಮುಗಂ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ್ ಶೆಟ್ಟಿ ನೆಕ್ರಾಜೆ, ಚೈತ್ರೇಶ್ ನೆಕ್ರಾಜೆ, ಸೀಮಚನಾ ಶರ್ಮ, ದೀಕ್ಷಿತ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.