ADVERTISEMENT

ದಕ್ಷಿಣ ಕನ್ನಡ: ಪುತ್ತೂರಲ್ಲಿ ಕಾಣಿಸಿಕೊಂಡ ಮುಳ್ಳು ಹಂದಿ 

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 6:47 IST
Last Updated 11 ಫೆಬ್ರುವರಿ 2026, 6:47 IST
ಪುತ್ತೂರಿನ ಜಿ.ಎಲ್.ರೋಟರಿ ಸಭಾ ಭವನದ ಪಕ್ಕದಲ್ಲಿ ಮಂಗಳವಾರ ಹಾಡಹಗಲೇ ಕಾಣಿಸಿಕೊಂಡ ಮುಳ್ಳು ಹಂದಿ
ಪುತ್ತೂರಿನ ಜಿ.ಎಲ್.ರೋಟರಿ ಸಭಾ ಭವನದ ಪಕ್ಕದಲ್ಲಿ ಮಂಗಳವಾರ ಹಾಡಹಗಲೇ ಕಾಣಿಸಿಕೊಂಡ ಮುಳ್ಳು ಹಂದಿ   

ಪುತ್ತೂರು: ರಾತ್ರಿ ವೇಳೆ ನಗರದ ಮಧ್ಯಭಾಗಕ್ಕೆ ಕಾಲಿಟ್ಟಿದ್ದ ಮುಳ್ಳು ಹಂದಿಯೊಂದು ಹಿಂತಿರುಗದೆ ನಗರದಲ್ಲೇ ಕಾಣಿಸಿಕೊಂಡು ಜನರಿಗೆ ಕುತೂಹಲದ ಮೂಡಿಸಿದ ಘಟನೆ ಪುತ್ತೂರು ನಗರದಲ್ಲಿ ನಡೆದಿದೆ.

ಪುತ್ತೂರು ನಗರದ ಆಸುಪಾಸಿನ ‌ಗುಡ್ಡದಿಂದ ಸೋಮವಾರ ರಾತ್ರಿ ನಗರಕ್ಕೆ ಬಂದಿದ್ದ ಮುಳ್ಳುಹಂದಿ ರೋಟರಿ ಜಿ.ಎಲ್.ಕಟ್ಟಡದ ಬಳಿ ಉಳಿದುಕೊಂಡಿತ್ತು. ಜನ ಸೇರುತ್ತಿದ್ದಂತೆ ಮುಳ್ಳು ಹಂದಿಯು ಪಕ್ಕದಲ್ಲಿರುವ ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ವಕೀಲ ಪುರಂದರ ಭಟ್ ಅವರ ಮನೆಯ ಹಿಂಬದಿಯ ಪೊದೆ ಕಡೆ ತೆರಳಿತ್ತು. ಈ ಕುರಿತು ಸ್ಥಳೀಯರು ನೀಡಿದ ಮಾಹಿತಿಯಂತೆ ಅರಣ್ಯ ಇಲಾಖೆಯವರು ಮುಳ್ಳುಹಂದಿಯನ್ನು ರಕ್ಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT