ADVERTISEMENT

ಮಂಗಳೂರಿಗೆ ಬಂದಿದ್ದ ಪ್ರಣವ್‌ ಮುಖರ್ಜಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 7:57 IST
Last Updated 1 ಸೆಪ್ಟೆಂಬರ್ 2020, 7:57 IST
ಆಗಿನ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಅಂದಿನ ಮೇಯರ್‌ ಕವಿತಾ ಸನಿಲ್‌ ಸ್ವಾಗತಿಸಿದ್ದರು. ಆಗಿನ ಸಚಿವರಾದ ರಮಾನಾಥ ರೈ ಇದ್ದರು.
ಆಗಿನ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಅಂದಿನ ಮೇಯರ್‌ ಕವಿತಾ ಸನಿಲ್‌ ಸ್ವಾಗತಿಸಿದ್ದರು. ಆಗಿನ ಸಚಿವರಾದ ರಮಾನಾಥ ರೈ ಇದ್ದರು.   

ಮಂಗಳೂರು: ರಾಷ್ಟ್ರಪತಿಯಾಗಿದ್ದ ಪ್ರಣವ್ ಮುಖರ್ಜಿ ಉಡುಪಿ ಜಿಲ್ಲೆಯ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಲು 2017 ರ ಜೂನ್‌ 18 ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು.

ಇಲ್ಲಿಂದ ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್‌ನಲ್ಲಿ ಅವರು ಉಡುಪಿಗೆ ತೆರಳಿದ್ದರು. ಅಂದಿನ ಮೇಯರ್‌ ಕವಿತಾ ಸನಿಲ್‌, ಆಗಿನ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಗೃಹ ಸಚಿವ ಕೆ.ಜೆ. ಜಾರ್ಜ್‌ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದರು.

ಜೂನ್ 18 ರಂದು ಬೆಳಿಗ್ಗೆ 11 ಗಂಟೆಗೆ ನಗರಕ್ಕೆ ಬಂದಿದ್ದ ಪ್ರಣವ್ ಮುಖರ್ಜಿ, 11.25ಕ್ಕೆ ಆದಿ ಉಡುಪಿಯ ಹೆಲಿಪ್ಯಾಡ್‌ನಲ್ಲಿ ಇಳಿದಿದ್ದರು. ಉಡುಪಿ, ಕೊಲ್ಲೂರು ದೇವಸ್ಥಾನಗಳ ದರ್ಶನ ಪಡೆದು, ಮರಳಿ ಮಂಗಳೂರಿನ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ತೆರಳಿದ್ದರು.

ADVERTISEMENT

‘ಅಂದು ಅವರನ್ನು ಸ್ವಾಗತಿಸುವ ಅವಕಾಶ ನನಗೆ ಒದಗಿ ಬಂದಿತ್ತು. ಸರಳ ವ್ಯಕ್ತಿತ್ವದ, ಸಹೃದಯಿ ರಾಷ್ಟ್ರಪತಿಯನ್ನು ಅವರನ್ನು ಸ್ವಾಗತಿಸಿದ್ದು ಈಗಲೂ ನನಗೆ ಅವಿಸ್ಮರಣೀಯ ಕ್ಷಣವಾಗಿದೆ. ಅವರ ನಿಧನದ ಸುದ್ದಿ ಆಘಾತ ತಂದಿದೆ’ ಎಂದು ಮಾಜಿ ಮೇಯರ್‌ ಕವಿತಾ ಸನಿಲ್‌ ಸ್ಮರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.