ADVERTISEMENT

ಭವಿಷ್ಯ ನಿರ್ಧರಿಸುವ ಪಿಯು ಶಿಕ್ಷಣ: ರಾಜೇಶ್ ಚೌಟ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2023, 4:29 IST
Last Updated 6 ಡಿಸೆಂಬರ್ 2023, 4:29 IST
ಮೂಡುಬಿದಿರೆಯ ನ್ಯೂವೈಬ್ರಂಟ್ ಕಾಲೇಜಿನಲ್ಲಿ ನಡೆದ ‘ವೈಬ್ರಂಟ್ ಡೇ’ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪ್ರೊ.ನವಕಾಂತ್ ಭಟ್ ಅವರನ್ನು ಸನ್ಮಾನಿಸಲಾಯಿತು. ಅಭಯಚಂದ್ರ ಜೈನ್, ರಾಜೇಶ್ ಚೌಟ, ಚಂದ್ರಶೇಖರ್ ರಾಜೇ ಅರಸ್ ಭಾಗವಹಿಸಿದ್ದರು
ಮೂಡುಬಿದಿರೆಯ ನ್ಯೂವೈಬ್ರಂಟ್ ಕಾಲೇಜಿನಲ್ಲಿ ನಡೆದ ‘ವೈಬ್ರಂಟ್ ಡೇ’ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪ್ರೊ.ನವಕಾಂತ್ ಭಟ್ ಅವರನ್ನು ಸನ್ಮಾನಿಸಲಾಯಿತು. ಅಭಯಚಂದ್ರ ಜೈನ್, ರಾಜೇಶ್ ಚೌಟ, ಚಂದ್ರಶೇಖರ್ ರಾಜೇ ಅರಸ್ ಭಾಗವಹಿಸಿದ್ದರು   

ಮೂಡುಬಿದಿರೆ: ಪಿಯು ಶಿಕ್ಷಣವು 50 ವರ್ಷದ ಭವಿಷ್ಯವನ್ನು ನಿರ್ಧರಿಸುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ಬಹುಮುಖ್ಯವಾದ ತಿರುವು ನೀಡುವ ಈ ಸಮಯದಲ್ಲಿ ಭವಿಷ್ಯದಲ್ಲಿ ಏನಾಗಬೇಕು ಎಂಬುದನ್ನು ತೀರ್ಮಾನಿಸಿ ಮುನ್ನುಗ್ಗಬೇಕು. ಸಾಧಕರನ್ನು ಆದರ್ಶವಾಗಿರಿಸಿಕೊಂಡು ಗುರಿಯೆಡೆಗೆ ತಲುಪಬೇಕು ಎಂದು ಮಂಗಳೂರಿನ ರಾಜಲಕ್ಷ್ಮಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ರಾಜೇಶ್ ಚೌಟ ಹೇಳಿದರು.

ಕಲ್ಲಬೆಟ್ಟುವಿನ ನ್ಯೂ ವೈಬ್ರಂಟ್ ಪಿಯು ಕಾಲೇಜಿನಲ್ಲಿ ನಡೆದ ‘ವೈಬ್ರಂಟ್ ಡೇ‘ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಅಭಯಚಂದ್ರ ಜೈನ್, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿಯಾಗಬೇಕಾದರೆ ಆಧುನಿಕ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಳ್ಳುವ ಅವಶ್ಯಕತೆ ಇದೆ ಎಂದರು.

ADVERTISEMENT

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಇಂಟರ್ ಡಿಸಿಪ್ಲಿನರಿ ವಿಜ್ಞಾನ ವಿಭಾಗದ ಡೀನ್ ಹಾಗೂ ನ್ಯಾನೊ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರದ ಪ್ರಾಧ್ಯಾಪಕ ನವಕಾಂತ್ ಭಟ್ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಸಹ ಸಂಸ್ಥಾಪಕ ಚಂದ್ರಶೇಖರ್ ರಾಜೇ ಅರಸ್ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲ ಎಸ್.ಎನ್.ವೆಂಕಟೇಶ್ ನಾಯಕ್ ವರದಿ ವಾಚಿಸಿದರು. ಶಾಲಾ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಆನಂದ್,  ಕಾಲೇಜಿನ ಸಹ ಸಂಸ್ಥಾಪಕರಾದ ಯೋಗೇಶ್ ಬೆಡೇಕರ್, ಸುಭಾಷ್ ಜಾ, ಮೆಹಬೂಬ ಬಾಷಾ, ಶರತ್ ಗೋರೆ ಇದ್ದರು.

ವಿನಾಯಕ್ ಶೆಣೈ ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ರಶ್ಮಿ ಡಿ.ಅರಸ್ ವಂದಿಸಿದರು. ವರ್ಷ ಕಾಮತ್ ನಿರೂಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.