ADVERTISEMENT

ಉಳ್ಳಾಲ: ಚೂರಿ ಇರಿತದಿಂದ ಗಾಯ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 16:23 IST
Last Updated 19 ಅಕ್ಟೋಬರ್ 2021, 16:23 IST
ಚೂರಿ ಇರಿತದಿಂದ ಗಾಯಗೊಂಡ ಹರೀಶ್ ಗಾಣಿಗ
ಚೂರಿ ಇರಿತದಿಂದ ಗಾಯಗೊಂಡ ಹರೀಶ್ ಗಾಣಿಗ   

ಉಳ್ಳಾಲ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದ ಘಟನೆ ಉಳ್ಳಾಲದಲ್ಲಿ ಮಂಗಳವಾರ ನಡೆದಿದೆ.

ಗ್ಯಾಸ್ ದುರಸ್ತಿ ಮಾಡುವ ಅಂಗಡಿ ಹೊಂದಿರುವ ಉಳಿಯ ನಿವಾಸಿ ಹರೀಶ್ ಗಾಣಿಗ (42) ಚೂರಿ ಇರಿತಕ್ಕೆ ಒಳಗಾದವರು. ಕೆಲವು ದಿನಗಳ ಹಿಂದೆ ಆರೋಪಿ ಬಾಲಕ, ಹರೀಶ್ ಗಾಣಿಗ ಜೊತೆ ಜಗಳ ಮಾಡಿದ್ದ ಎನ್ನಲಾಗಿದ್ದು, ಅವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು.

ಇದರಿಂದ ಕೋಪಗೊಂಡ ಆರೋಪಿ, ಹರೀಶ್ ಅವರ ಅಂಗಡಿ ಬಳಿಬಂದು ಗಲಾಟೆ ಮಾಡಿ, ಚೂರಿಯಿಂದ ಇರಿದಿದ್ದಾನೆ ಎನ್ನಲಾಗಿದೆ. ಹರೀಶ್ ಗಾಣಿಗ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಹರೀಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.