ADVERTISEMENT

ವಾದಿರಾಜ ಕಲ್ಲೂರಾಯರಿಗೆ ಜ್ಞಾನ ಜ್ಯೋತಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 4:52 IST
Last Updated 16 ಸೆಪ್ಟೆಂಬರ್ 2022, 4:52 IST
ಡಾ.ವಾದಿರಾಜ ಕಲ್ಲೂರಾಯ
ಡಾ.ವಾದಿರಾಜ ಕಲ್ಲೂರಾಯ   

ಮಂಗಳೂರು: ನಗರದ ಬಜಾಲ್‌ನ ಜ್ಞಾನಜ್ಯೋತಿ ಸಂಸ್ಥೆಯು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಾರ್ಷಿಕವಾಗಿ ನೀಡುವ ‘ಜ್ಞಾನ ಜ್ಯೋತಿ ಪ್ರಶಸ್ತಿ’ಗೆ ಯಕ್ಷಗಾನ ಕಲಾವಿದ, ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ವಾದಿರಾಜ ಕಲ್ಲೂರಾಯ ಆಯ್ಕೆಯಾಗಿದ್ದಾರೆ.

ಸಾಹಿತ್ಯ, ಮಾಧ್ಯಮ, ಕಲೆ, ಸಂವಹನ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ₹ 10ಸಾವಿರ ಗೌರವಧನ ಒಳಗೊಂಡಿದೆ. ಅಕ್ಟೋಬರ್ 25ಕ್ಕೆ ಮಂಗಳೂರು ಬಜಾಲ್‌ನ ಪ್ರಜ್ಞಾ ಮಂದಾರ ಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ವಸಿಷ್ಠ ಭಟ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT