ADVERTISEMENT

‘ಮಾಳವಿಕಾ ಪರಿಣಯ’ ಯಕ್ಷಗಾನ ಪ್ರದರ್ಶನ 8ರಂದು

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 14:27 IST
Last Updated 1 ಜುಲೈ 2022, 14:27 IST
ಪತ್ರಿಕಾಗೋಷ್ಠಿಯಲ್ಲಿ ಸುಧಾಕರ್ ರಾವ್ ಮಾತನಾಡಿದರು. ಅನ್ನಪೂರ್ಣ ಶಾಸ್ತ್ರಿ, ಮಂಜುಳಾ ಶೆಟ್ಟಿ, ಕೇಶವ ಹೆಗಡೆ, ಎಸ್‌.ಎಸ್‌.ನಾಯಕ್‌ ಇದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ಸುಧಾಕರ್ ರಾವ್ ಮಾತನಾಡಿದರು. ಅನ್ನಪೂರ್ಣ ಶಾಸ್ತ್ರಿ, ಮಂಜುಳಾ ಶೆಟ್ಟಿ, ಕೇಶವ ಹೆಗಡೆ, ಎಸ್‌.ಎಸ್‌.ನಾಯಕ್‌ ಇದ್ದಾರೆ   

ಮಂಗಳೂರು: ನಗರದ ಕಲಾಸಂಗಮ ಚಾರಿಟಬಲ್ ಟ್ರಸ್ಟ್‌ ಮತ್ತು ಕನ್ನಡ–ಸಂಸ್ಕೃತಿ ಇಲಾಖೆ ಆಯೋಜಿಸಿರುವ ‘ಮಾಳವಿಕಾ ಪರಿಣಯ’ ಯಕ್ಷಗಾನ ಪ್ರದರ್ಶನ ಇದೇ ತಿಂಗಳ 8ರಂದು ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಲಿದೆ.

ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು ಬಡಗು ತಿಟ್ಟಿನ ಕಲಾವಿದ ಲಕ್ಷ್ಮಿನಾರಾಯಣ ಹೆಗಡೆ ಅವರನ್ನು ಸನ್ಮಾನಿಸಲಾಗುವುದು ಎಂದು ಕಲಾಸಂಗಮದ ಸುಧಾಕರ ಪೇಜಾವರ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾಳಿದಾಸನ ಸಂಸ್ಕೃತ ನಾಟಕ ಮಾಳವಿಕಾಗ್ನಿಮಿತ್ರಮ್‌ನ ಕಥಾಭಾಗವನ್ನು ಆಧರಿಸಿ ಯಕ್ಷಗಾನ ಪ್ರಸಂಗ ಸಿದ್ಧಪಡಿಸಲಾಗಿದೆ. ಮೊದಲ ಪ್ರದರ್ಶನ ಸಿರಸಿಯಲ್ಲಿ ಕಳೆದ ವರ್ಷ ಆಗಿತ್ತು ಎಂದು ಅವರು ತಿಳಿಸಿದರು.

ADVERTISEMENT

ಸನ್ಮಾನ ಕಾರ್ಯಕ್ರಮದಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ವೈದ್ಯ ಅಣ್ಣಯ್ಯ ಕುಲಾಲ್‌, ಉದ್ಯಮಿ ದಿನೇಶ್ ಪೈ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು.

ಕಲಾಸಂಗಮದ ಅಧ್ಯಕ್ಷ ಕೇಶವ ಹೆಗಡೆ, ಎಸ್‌.ಎಸ್‌.ನಾಯಕ್‌, ಅನ್ನಪೂರ್ಣಾ ಶಾಸ್ತ್ರಿ ಮತ್ತು ಮಂಜುಳಾ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.