ADVERTISEMENT

ದಕ್ಷಿಣ ಕನ್ನಡ | ಅಪಾರ್ಟ್‌ಮೆಂಟ್‌ ಕಟ್ಟಡದಿಂದ ಬಿದ್ದು ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 12:34 IST
Last Updated 30 ಮಾರ್ಚ್ 2023, 12:34 IST
   

ಮಂಗಳೂರು: ನಗರದ ಕದ್ರಿ ಕೆಪಿಟಿ ಸಮೀಪದ 'ಪ್ಲಾ‌ನೆಟ್‌ ಎಸ್‌ಕೆಎಸ್‌ ಅಪಾರ್ಟ್‌ಮೆಂಟ್‌ ಸಮುಚ್ಚಯ'ದ 14ನೇ ಮಹಡಿಯಿಂದ ಬಿದ್ದು ಯುವಕ ಗುರುವಾರ ಮುಂಜಾನೆ ಮೃತಪಟ್ಟಿದ್ದಾರೆ.

'ಈ ಅಪಾರ್ಟ್‌ಮೆಂಟ್‌ ಸಮುಚ್ಚಯದ 14ನೇ ಮಹಡಿಯಲ್ಲಿ ವಾಸವಿರುವ ಅಬ್ದುಲ್ ಸಲೀಂ ಅವರ ಮಗ ಮಹಮದ್ ಶಾಮಲ್ (21 ವರ್ಷ) ಮೃತ ಯುವಕ' ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಮುಂಜಾನೆ 4.45ರ ಸುಮಾರಿಗೆ ಮಹಮ್ಮದ್‌ ಶಾಮಲ್‌ ಕಟ್ಟಡದಿಂದ ಕೆಳಗೆ ಬಿದ್ದಿದ್ದರು. ಇದು ಆಕಸ್ಮಿಕ ಘಟನೆಯೋ, ಆತ್ಮಹತ್ಯೆಯೋ ತಿಳಿದುಬಂದಿಲ್ಲ. ಮೃತ ಯುವಕನ ಮಾವ ಉಮರ್ ಫಾರೂಕ್ ಅವರು ದೂರು ನೀಡಿದ್ದು, ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.