
ಪ್ರಜಾವಾಣಿ ವಾರ್ತೆಮಲೇಬೆನ್ನೂರು: ಪಿಂಚಣಿದಾರರಿಗೆ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮೀಪದ ಗೋವಿನಹಾಳು ಗ್ರಾಮದ ಪೋಸ್ಟ್ ಮಾಸ್ಟರ್ ನಾಗಪ್ಪ ಅಮಾನತುಗೊಂಡಿದ್ದಾರೆ.
ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿ ಮನಿ ಆರ್ಡರ್ ಹಣ ದುರುಪಯೋಗದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ವರದಿ ಆಧರಿಸಿ ಕ್ರಮ ಜರುಗಿಸಲಾಗಿದೆ. 12 ಸಾವಿರ ರೂಪಾಯಿ ಕಟ್ಟುವುದಾಗಿ ತಿಳಿಸಿದ ಪೋಸ್ಟ್ ಮಾಸ್ಟರ್ ಅಮಾನತು ಹಿಂದಕ್ಕೆ ಪಡೆಯುವಂತೆ ಕೈಕಾಲು ಹಿಡಿದರು. ವಿಚಾರಣೆ ಮುಂದುವರಿದಿದೆ ಎಂದು ಗೊತ್ತಾಗಿದೆ.
ಹಿಂಡಸಗಟ್ಟೆ ಗ್ರಾಮದ 100ಕ್ಕೂ ಹೆಚ್ಚು ಪಿಂಚಣಿದಾರರಿಗೆ ಅಂಚೆ ನಿರೀಕ್ಷಕರು ಹಾಗೂ ಸಿಬ್ಬಂದಿ ಗುರುವಾರ ಹಣ ವಿತರಣೆ ಮಾಡಿದರು ಎಂದು ಗ್ರಾಮಸ್ಥರು ತಿಳಿಸಿದರು.
ಅಂಚೆ ಇಲಾಖೆ ಕ್ರಮಕ್ಕೆ ಪಿಂಚಣಿದಾರರು ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.