ADVERTISEMENT

ಜೊಳ್ಳಾಗುತ್ತಿರುವ ಬತ್ತ

​ಪ್ರಜಾವಾಣಿ ವಾರ್ತೆ
Published 25 ಮೇ 2012, 6:15 IST
Last Updated 25 ಮೇ 2012, 6:15 IST

ತ್ಯಾವಣಿಗೆ: ಕಾಳು ಬಲಿಯುವ ಹಂತದಲ್ಲಿರುವ ಬತ್ತದ ಹೊಲಗಳಿಗೆ ನೀರಿಲ್ಲದೆ ಸುಮಾರು ಸಾವಿರಾರು ಎಕರೆ ಬತ್ತದ ಬೆಳೆ ಒಣಗುತ್ತಿದೆ.

ಈಗಾಗಲೇ ಕಟಾವಿನ ಹಂತಕ್ಕೆ ಬರುತ್ತಿರುವ ಬತ್ತದ ಬೆಳೆಗೆ ಕೊನೆಯದಾಗಿ ಇನ್ನೊಂದು ಬಾರಿ ನೀರು ಹಾಯಿಸಬೇಕಾಗಿದ್ದು, ಭದ್ರಾ 2ನೇ ಉಪನಾಲೆಯ ಟ್ಯೂಬ್‌ನಲ್ಲಿ 20-25ದಿನಗಳಿಂದ ಮರದ ತುಂಡು ಸಿಕ್ಕಿ ಹಾಕಿಕೊಂಡಿದ್ದು, ಗೇಟ್ ಎತ್ತಿದ್ದರೂ ನೀರು ಬರುತ್ತಿಲ್ಲವಾಗಿದ್ದು, ಈ 2ನೇ ಉಪನಾಲೆ ಕಾಲುವೆ ವ್ಯಾಪ್ತಿಯಲ್ಲಿ ಬರುವ ನವಿಲೇಹಾಳ್, ದೊಡ್ಡಘಟ್ಟ, ತ್ಯಾವಣಿಗೆ ಗ್ರಾಮಗಳ ರೈತರ ಸಾವಿರಾರು ಎಕರೆ ಜಮೀನುಗಳಲ್ಲಿ ನೀರಿಲ್ಲದೆ ಬತ್ತ ಒಣಗಿ ಜೊಳ್ಳಾಗುತ್ತಿದ್ದು, ಅಧಿಕ ಹಣ ಖರ್ಚು ಮಾಡಿ ಬೆಳೆ ಬೆಳೆಯುತ್ತಿರುವ ರೈತರಿಗೆ ಬಹಳ ನಷ್ಟವಾಗುತ್ತಿದೆ.

ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರ ಗಮನಕ್ಕೆ ತಂದರೂ ಸಹ ಟ್ಯೂಬ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಮರದ ತುಂಡನ್ನು ತೆಗೆಸಿ, ನೀರು ಸರಾಗವಾಗಿ ಹರಿಯುವಂತೆ ಕ್ರಮಕೈಗೊಳ್ಳುತ್ತಿಲ್ಲ.  ಅಲ್ಲದೆ ಜನಪ್ರತಿನಿಧಿಗಳ ಗಮನಕ್ಕೂ ತಂದರೂ ಏನೂ ಪ್ರಯೋಜನವಾಗುತ್ತಿಲ್ಲ. ಈ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಾವುಗಳು ಸಂಬಂಧಪಟ್ಟ ಇಲಾಖೆ ಮುಂದೆ ನೀರಿಗಾಗಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತರಾದ ದೊಡ್ಡಘಟ್ಟ ತೋಪಣ್ಣ, ರವಿ, ಹರೀಶ್, ಭೀಮೇಶ್, ಬೆನಕಪ್ಪ, ಸತ್ಯನಾರಾಯಣ ಕಬ್ಬಳ, ಹೊನ್ನೂರ್‌ಸಾಬ್ ನವಿಲೇಹಾಳ್, ರಫೀ ಎಚ್ಚರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.