ADVERTISEMENT

ಮಂಡಕ್ಕಿ ಗೋದಾಮಿಗೆ ಬೆಂಕಿ: ಅಪಾರ ನಷ್ಟ

​ಪ್ರಜಾವಾಣಿ ವಾರ್ತೆ
Published 13 ಜನವರಿ 2011, 6:40 IST
Last Updated 13 ಜನವರಿ 2011, 6:40 IST

ದಾವಣಗೆರೆ: ಮಂಡಕ್ಕಿ ಗೋದಾಮಿಗೆ ಬುಧವಾರ ರಾತ್ರಿ ಬೆಂಕಿಬಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.ಆಜಾದ್‌ನಗರದ ಹೊದಿಗೆರೆ ಸಾದಿಕ್ ಎಂಬುವರಿಗೆ ಸೇರಿದ ಮಂಡಕ್ಕಿ ಗೋದಾಮಿನಲ್ಲಿ ಘಟನೆ ನಡೆದಿದೆ.

ಗೋದಾಮಿನಲ್ಲಿದ್ದ 800 ಚೀಲ ಮಂಡಕ್ಕಿ ಹುರಿಯಲು ಸಿದ್ಧಗೊಳಿಸಿದ್ದ ಅಕ್ಕಿ, ಖಾಲಿ ಚೀಲಗಳು ಸೇರಿ ಸುಮಾರು  9 ಲಕ್ಷ ನಷ್ಟ ಸಂಭವಿಸಿದೆ ಎಂದು  ಸಾದಿಕ್ ತಿಳಿಸಿದರು. ಸುದ್ದಿ ತಿಳಿದ ತಕ್ಷಣ ಮೂರು ಅಗ್ನಿಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿ  ಆಗಮಿಸಿ ಬೆಂಕಿ ನಂದಿಸಿದವು.

ಕಳೆದ ವರ್ಷವೂ ಇದೇ ಸ್ಥಳದಲ್ಲಿ ಸಾದಿಕ್ ಅವರದೇ ಗೋದಾಮಿಗೆ ಬೆಂಕಿಬಿದ್ದಿತ್ತು. ಅಂದು ಹಸು ಮತ್ತು ಕುರಿ ಬಲಿಯಾಗಿದ್ದವು. ಘಟನೆ ಸಂದರ್ಭ ಎಲ್ಲ ಕಾರ್ಮಿಕರು ಮನೆಗೆ ತೆರಳಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.