ADVERTISEMENT

2ನೇ ರಾಜಧಾನಿ: 30ರಂದು ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 5:50 IST
Last Updated 3 ಜುಲೈ 2012, 5:50 IST

ದಾವಣಗೆರೆ: ದಾವಣಗೆರೆಯನ್ನು ರಾಜ್ಯದ 2ನೇ ರಾಜಧಾನಿ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಜೂನ್ 30ರಂದು ಎಲ್ಲ ಸಮಾಜದ ಸ್ವಾಮೀಜಿಗಳ ನೇತೃತ್ವದಲ್ಲಿ ನಗರದಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲು ಶನಿವಾರ ಶಿವಯೋಗಿ ಮಂದಿರದಲ್ಲಿ ಏರ್ಪಡಿಸಿದ್ದ `ದಾವಣಗೆರೆ 2ನೇ ರಾಜಧಾನಿ ಹೋರಾಟ ಸಮಿತಿ~ ಸಭೆಯಲ್ಲಿ ನಿರ್ಧರಿಸಲಾಯಿತು.

3ನೇ ಹಂತದ ಹೋರಾಟದ ಕಾರ್ಯಕ್ರಮವಾಗಿ, ಮೆರವಣಿಗೆ ನಡೆಸಲಾಗುವುದು. ಸಮಿತಿಯ ಪದಾಧಿಕಾರಿಗಳು, ರೈತ ಪರ, ಕನ್ನಡಪರ, ವಿದ್ಯಾರ್ಥಿ, ವಕೀಲರು, ಮಹಿಳಾ ಸಂಘಟನೆಗಳು, ನಗರಪಾಲಿಕೆಯ ಹಾಲಿ, ಮಾಜಿ ಸದಸ್ಯರು, ಮೇಯರ್‌ಗಳು ಪಾಲ್ಗೊಳ್ಳುವಂತೆ ಕೋರಬೇಕು. ಜನರನ್ನು ಸಂಘಟಿಸಲು ಭಾರಿ ಪ್ರಮಾಣದಲ್ಲಿ ಕರಪತ್ರಗಳನ್ನು ಮುದ್ರಿಸಿ ನಗರ ಮತ್ತು ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಹಂಚಲು ಹಾಗೂ ಪಕ್ಕದ ಚಿತ್ರದುರ್ಗ, ಬಳ್ಳಾರಿ, ಹಾವೇರಿ, ಕೊಪ್ಪಳ, ಧಾರವಾಡ, ವಿಜಾಪುರ, ಬೀದರ್, ಕಾರವಾರ ಮತ್ತು ಗುಲ್ಬರ್ಗ ಜಿಲ್ಲೆಗಳ ಪ್ರಮುಖರನ್ನು ಕರೆತರಲು ತೀರ್ಮಾನಿಸಲಾಯಿತು.

ಸಮಿತಿಯ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ, ಕರಿಕುಂಟೆ ವೀರಭದ್ರಪ್ಪ, ಮಹಾದೇವಮ್ಮ, ಕೆ.ಜಿ. ಶರಣಪ್ಪ, ಅರುಣ್‌ಕುಮಾರ್ ಕುರುಡಿ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.