ದಾವಣಗೆರೆ: ಜಿಲ್ಲೆಯಲ್ಲಿ 41 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಒಬ್ಬರು ಮೃತಪಟ್ಟಿದ್ದಾರೆ. 195 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ತಾಲ್ಲೂಕಿನ ಕಬ್ಬೂರು ನಿವಾಸಿ 45 ವರ್ಷದ ಮಹಿಳೆ ತೀವ್ರ ಉಸಿರಾಟದ ಸಮಸ್ಯೆಯಿಂದ ನಿಧನರಾದರು.
ದಾವಣಗೆರೆ ತಾಲ್ಲೂಕಿನಲ್ಲಿ 18, ಹರಿಹರ ತಾಲ್ಲೂಕಿನಲ್ಲಿ 9, ಹೊನ್ನಾಳಿ ನ್ಯಾಮತಿ ತಾಲ್ಲೂಕಿನಲ್ಲಿ 8, ಚನ್ನಗಿರಿ ತಾಲ್ಲೂಕಿನಲ್ಲಿ 6 ಮಂದಿಗೆ ಕೊರೊನಾ ಬಂದಿದೆ.
ಜಿಲ್ಲೆಯಲ್ಲಿ ಈವರೆಗೆ 19,180 ಮಂದಿಗೆ ಸೋಂಕು ತಗುಲಿದೆ. 17,694 ಮಂದಿ ಗುಣಮುಖರಾಗಿದ್ದಾರೆ. 251 ಮಂದಿ ಮೃತಪಟ್ಟಿದ್ದಾರೆ. 1,235 ಸಕ್ರಿಯ ಪ್ರಕರಣಗಳಿವೆ.
8 ಜನರಿಗೆ ಕೊರೊನಾ ಸೋಂಕು
ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ 8 ಜನರಿಗೆ ಕೊರೊನಾ ಸೋಂಕು ಶನಿವಾರ ತಗುಲಿರುವುದು ಖಚಿತಪಟ್ಟಿದೆ.
ಪಟ್ಟಣದ ಇಬ್ಬರು, ವಿನಾಯಕ ನಗರ, ಎಕ್ಕೆಗೊಂದಿ, ಕುಂಬಳೂರು, ಹೊಸಪಾಳ್ಯ, ಕೊಕ್ಕನೂರು ಗ್ರಾಮದ ತಲಾ ಒಬ್ಬರಿಗೆ ಕೊರೊನಾ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.