ADVERTISEMENT

7ರಿಂದ ರಾಜ್ಯಮಟ್ಟದ ಕಬಡ್ಡಿ ಟೂರ್ನಿ

​ಪ್ರಜಾವಾಣಿ ವಾರ್ತೆ
Published 1 ಮೇ 2011, 9:50 IST
Last Updated 1 ಮೇ 2011, 9:50 IST

ದಾವಣಗೆರೆ: ನಗರದ ಡಿಸಿಎಂ ಟೌನ್‌ಶಿಪ್‌ನಲ್ಲಿ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಟೂರ್ನಿ ಮೇ 7 ಹಾಗೂ 8ರಂದು ನಡೆಯಲಿದೆ. 

ಪ್ರಥಮ ಬಹುಮಾನ ` 15 ಸಾವಿರ ಹಾಗೂ ಪಾರಿತೋಷಕ, ದ್ವಿತೀಯ ಬಹುಮಾನ ` 10 ಸಾವಿರ ಹಾಗೂ ಪಾರಿತೋಷಕ, ತೃತೀಯ ಬಹುಮಾನ ` 7 ಸಾವಿರ ಹಾಗೂ ಪಾರಿತೋಷಕ ಹಾಗೂ ನಾಲ್ಕನೇ ಬಹುಮಾನ ` 5 ಸಾವಿರ ಹಾಗೂ ಪಾರಿತೋಷಕ ನೀಡಲಾಗುವುದು.

ಸರ್ವೋತ್ತಮ ಆಟಗಾರ, ಉತ್ತಮ ಧಾಳಿಗಾರ, ಉತ್ತಮ ಹಿಡಿತಗಾರನಿಗೆ ` 501, ಪಾರಿತೋಷಕ ನೀಡಲಾಗುವುದು ಎಂದು ಶ್ರೀಚಾಮುಂಡೇಶ್ವರಿ ಕ್ರೀಡಾ ಸಮಿತಿ ತಿಳಿಸಿದೆ.

ಮಾಹಿತಿಗೆ ಶಂಕರ್ ಗಣೇಶ್ ಮೊ: 94487 28797, ನಾರಾಯಣಸ್ವಾಮಿ ಮೊ: 99720 49306, ಆರ್. ನಾಗರಾಜ ಮೊ: 94830 21112 ಸಂಪರ್ಕಿಸಬಹುದು.

ರಕ್ತದಾನ ಮಾಡಿ, ಜೀವ ಉಳಿಸಿ: ರಕ್ತದಾನ ಮಾಡಿ ಮತ್ತೊಂದು ಜೀವವನ್ನು ಉಳಿಸಿ ಎಂದು ಹೃದಯರೋಗ ತಜ್ಞ ಡಾ.ಜಿ. ಶಿವಲಿಂಗಪ್ಪ ಸಲಹೆ ನೀಡಿದರು.

ನಗರದ ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ನಡೆದ ವಿಶೇಷ ಉಪನ್ಯಾಸದಲ್ಲಿ  ಅವರು ಮಾತನಾಡಿದರು.

ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎನ್. ಪರಶುರಾಮನಗೌಡ, ಪ್ರಾಂಶುಪಾಲ ಡಾ.ಎಚ್.ವಿ. ಶಿವಶಂಕರ್ ಇದ್ದರು. ಪ್ರಶಿಕ್ಷಣಾರ್ಥಿ ಜ್ಯೋತಿ ಭಟ್ ಪ್ರಾರ್ಥಿಸಿದರು. ಎಂ.ವಿ. ಹರ್ಷಲತಾ ಸ್ವಾಗತಿಸಿದರು. ಕೆ.ಎಸ್. ದಿವಾಕರ ನಾಯಕ್ ವಂದಿಸಿದರು. ಸಿ.ಜಿ. ಅನಿತಾ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.