ADVERTISEMENT

ಕೆಲಸ ಕೊಡಿಸುವುದಾಗಿ ₹ 3 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 3:29 IST
Last Updated 8 ನವೆಂಬರ್ 2020, 3:29 IST

ದಾವಣಗೆರೆ: ಕೆಲಸ ಕೊಡಿಸುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಭರಣಿ ಹೋಟೆಲ್ ಬಳಿ ₹ 3 ಲಕ್ಷ ವಂಚಿಸಿದ್ದು, ಈ ಸಂಬಂಧ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ನಿಜಲಿಂಗಪ್ಪ ಬಡಾವಣೆಯ 2ನೇ ಮೇನ್, 2ನೇ ಕ್ರಾಸ್‌ನ ಎಂ.ಎಸ್. ಅಬ್ದುಲ್ ಬಷೀರ್ ಮೋಸ ಹೋದವರು. ಬಾಗೇಪಲ್ಲಿ ನಿವಾಸಿ ಸುಬಾನ್ ಮೋಸ ಮಾಡಿದ ವ್ಯಕ್ತಿ. ಈತ ಬಾಗಲಕೋಟೆ ನಿವಾಸಿ ಜಿಯಾವುಲ್ಲಾ ಎಂದು ಹೇಳಿ ಮೋಸ ಮಾಡಿದ್ದಾನೆ.

ಅಬ್ದುಲ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದರು. ಎರಡು ತಿಂಗಳ ಹಿಂದೆ ಹೈಕೋರ್ಟ್ ಬಳಿ ಸುಬಾನ್ ಪರಿಚಯವಾಗಿದ್ದು, ‘ನಾನು ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಕಡೆ ಹುಡುಗರು ಇದ್ದರೆ ಹೇಳಿ. ತಿಂಗಳಿಗೆ ₹1 ಲಕ್ಷದಿಂದ ₹1.50 ಲಕ್ಷದವರೆಗೆ ಸಂಬಳ ಸಿಗುವ ಕೆಲಸ ಕೊಡಿಸುತ್ತೇನೆ’ ಎಂದು ಅಬ್ದುಲ್‌ ಅವರನ್ನು
ನಂಬಿಸಿದ್ದಾನೆ.

ADVERTISEMENT

ಕೆಲಸ ಕೊಡಿಸಲು ₹3 ಲಕ್ಷ ಡಿಪಾಸಿಟ್ ಕಟ್ಟಬೇಕು ಎಂದು ಹೇಳಿ ಹಣ ಪಡೆದು ದೂರವಾಣಿ
ಮೂಲಕ ಸಂದರ್ಶನದ ಕರೆ ಬರುತ್ತದೆ ಎಂದು ಹೇಳಿ ಸುಬಾನ್ ಮೊಬೈಲ್ ಸ್ವಿಚ್ಡ್‌ ಆಫ್
ಮಾಡಿಕೊಂಡಿದ್ದಾನೆ.

ಆ ಬಳಿಕ ಅಬ್ದುಲ್ ಸಿ.ಇ.ಎನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.