ADVERTISEMENT

ನೆಲದ ಸಂಸ್ಕೃತಿಯ ಬಿಂಬಿಸುವ ಕಾರ್ಯಕ್ರಮ

ಐರ್ಲೆಂಡ್‌ನಲ್ಲಿ ಯುಗಾದಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 4:17 IST
Last Updated 13 ಏಪ್ರಿಲ್ 2022, 4:17 IST
ಐರ್ಲೆಂಡ್‌ನ ಡಬ್ಲಿನ ನಗರದಲ್ಲಿ ಕನ್ನಡ ಕಲಿ ಸಂಘದ ವತಿಯಿಂದ ಭಾನುವಾರ ನಡೆದ ಯುಗಾದಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ನಡಿಗರು.
ಐರ್ಲೆಂಡ್‌ನ ಡಬ್ಲಿನ ನಗರದಲ್ಲಿ ಕನ್ನಡ ಕಲಿ ಸಂಘದ ವತಿಯಿಂದ ಭಾನುವಾರ ನಡೆದ ಯುಗಾದಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ನಡಿಗರು.   

ಸಂತೇಬೆನ್ನೂರು: ಐರ್ಲೆಂಡ್‌ನ ಡಬ್ಲಿನ್ ನಗರದಲ್ಲಿ ನೆಲೆಸಿರುವ ಕನ್ನಡಿಗರ ‘ಕನ್ನಡ ಕಲಿ’ ಸಂಘವು ಯುಗಾದಿ ಅಂಗವಾಗಿ ಭಾನುವಾರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿತ್ತು.

‘ನಮ್ಮ ಮಕ್ಕಳಿಗೂ ಕನ್ನಡದ ಕಂಪು ಬೀರಬೇಕು. ಪಾಶ್ಚಾತ್ಯ ಸಂಸ್ಕೃತಿ ಪ್ರಭಾವಕ್ಕೆ ಒಳಗಾಗಿ ನಮ್ಮ ಮೂಲ ಸಂಸ್ಕೃತಿ ಮರೆಯಬಾರದು. ಭಾರತದಲ್ಲಿ ನೆಲೆಸಿರುವ ಅಜ್ಜ, ಅಜ್ಜಿಯರೊಂದಿಗೆ ಕನ್ನಡದಲ್ಲಿ ಸಂಭಾಷಣೆ ನಡೆಸಬೇಕು ಎಂಬ ಉದ್ದೇಶದಿಂದ ‘ಕನ್ನಡ ಕಲಿ’ ಸಂಘ ಸ್ಥಾಪಿಸಲಾಗಿದೆ. ಆ ಮೂಲಕ ಸಾಂದರ್ಭಿಕವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ’ ಎಂದು ಡಬ್ಲಿನ್‌ ನಗರದಲ್ಲಿ ನೆಲೆಸಿರುವ ಸಾಫ್ಟ್‌ವೇರ್‌ ಎಂಜಿನಿಯರ್, ತಣಿಗೆರೆ ಗ್ರಾಮದ ಕಾಂತೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲರೂ ಸಂಘಟಿತರಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಂಚಿಕೊಳ್ಳಲು ಯುಗಾದಿ ಸಂಭ್ರಮ ಆಚರಿಸಲಾಯಿತು. ಯುಗಾದಿ ವಿಶೇಷತೆ ಬಗ್ಗೆ ಸುಧಮ್ಮ ವಿವರಿಸಿದರು. ಕನ್ನಡ ಹಾಡುಗಳಿಗೆ ರೋಚನಾ ಕಾಂತೇಶ್, ಧೃತಿ ಪ್ರಶಾಂತ್, ಧೃವ ಪ್ರಶಾಂತ್, ವಾಗ್ಮಿ ಮಂಜುನಾಥ್, ಆಧ್ಯಾ ರೇವಣ ಸಿದ್ದು ನೃತ್ಯ ಮಾಡಿದರು. ಜಾನಪದ ಗೀತೆ, ಶ್ಲೋಕ ಹಾಗೂ ಭಾವ ಗೀತೆಗಳನ್ನು ಸುಧಾ, ದಿಶಾ, ದಿವ್ಯಾ ಭಟ್, ನಂದಿನಿ ಹಾಡಿದರು. ನಾಗಲಾಂಬಿಕಾ ಪಾತ್ರಾಭಿನಯ ಮಾಡಿದರು. ಹನುಮಾನ್, ರಾಮನ ವೇಷಧಾರಿಗಳು ಗಮನ ಸೆಳೆದರು. ಪುನೀತ್ ರಾಜ್‌ಕುಮಾರ್ ಅಭಿನಯದ ಬೊಂಬೆ ಹೇಳುತೈತೆ ಗೀತೆಯನ್ನು ಸುಶ್ರಾವ್ಯವಾಗಿ ಹಾಡಲಾಯಿತು’ ಎಂದು ಅವರು ವಿವರಿಸಿದರು. ಚೈತ್ರ ಹಾಗೂ ಚಂದನಾ ಕಾರ್ಯಕ್ರಮ ನಿರೂಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.