ADVERTISEMENT

ಬಸವಾಪಟ್ಟಣ | ಕಾರಿಗನೂರು: ವಿದ್ಯುತ್ ಪ್ರವಹಿಸಿ ರೈತ ಸಾವು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 16:31 IST
Last Updated 9 ನವೆಂಬರ್ 2023, 16:31 IST
ಪ್ರಶಾಂತ ನಾಯ್ಕ್
ಪ್ರಶಾಂತ ನಾಯ್ಕ್   

ಬಸವಾಪಟ್ಟಣ: ಸೂಳೆಕೆರೆ ಹಳ್ಳಕ್ಕೆ ಅಳವಡಿಸಿದ್ದ ಪಂಪ್‌ಸೆಟ್‌ನ ಪ್ಯಾನೆಲ್‌ ಬೋರ್ಡ್‌ ಸ್ಪರ್ಶಿಸಿದಾಗ ವಿದ್ಯುತ್ ಪ್ರವಹಿಸಿ ಕಾರಿಗನೂರಿನ ರೈತ ಪ್ರಶಾಂತ ನಾಯ್ಕ್‌ (48) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 

ಎರಡು ದಿನಗಳಿಂದ ಸುರಿದ ಮಳೆಗೆ ಸೂಳೆಕೆರೆ ಹಳ್ಳ ತುಂಬಿ ಹರಿಯುತ್ತಿದ್ದು, ಪ್ರಶಾಂತ್ ಅವರ ಗದ್ದೆಗೆ ಅಳವಡಿಸಿದ್ದ ಪಂಪ್‌ಸೆಟ್‌ನ ಪ್ಯಾನೆಲ್‌ ಬೋರ್ಡ್‌ ಹಳ್ಳದ ನೀರಲ್ಲಿ ಮುಳುಗಿತ್ತು. ಮಂಗಳವಾರ ಮುಂಜಾನೆ  ಅದನ್ನು ಎತ್ತಿ ಮೇಲಿಡಲು ಹೋದಾಗ ವಿದ್ಯುತ್‌ ಪ್ರವಹಿಸಿ ಮೃತರಾಗಿದ್ದಾರೆ.

ಮುಂಜಾನೆ ಮನೆಯಿಂದ ಹೊರ ಹೋಗಿದ್ದ ಅವರು ಸಂಜೆಯಾದರೂ ಬಾರದಿದ್ದರಿಂದ, ಮನೆಯವರು ಹುಡುಕಾಟ ನಡೆಸಿದ್ದರು. ಕೊನೆಗೆ ಪ್ರಶಾಂತ್ ಅವರ ಶವ ಹಳ್ಳದ ಬದಿಯಲ್ಲಿ ಪತ್ತೆಯಾಯಿತು. ಬೆಸ್ಕಾಂ ಮತ್ತು ಪೊಲೀಸರಿಗೆ ಕುಟುಂಬದವರು ಮಾಹಿತಿ ನೀಡಿದರು. ಬಸವಾಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.