ADVERTISEMENT

ಬಸವಪ್ರಭು ಶರ್ಮ ಸೇರಿ ಐದು ಮಂದಿಗೆ ಮುಖ್ಯಮಂತ್ರಿ ಪದಕ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 10:14 IST
Last Updated 7 ಜುಲೈ 2021, 10:14 IST
ಬಸವಪ್ರಭು ಶರ್ಮ
ಬಸವಪ್ರಭು ಶರ್ಮ   

ದಾವಣಗೆರೆ: ಇಲ್ಲಿನ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ಸೇರಿ ಐದು ಮಂದಿ ಅಧಿಕಾರಿಗಳು 2019ರ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.

ಜಗಳೂರು ಅಗ್ನಿಶಾಮಕ ಠಾಣೆಯ ಲೀಡಿಂಗ್ ಫೈರ್‌ಮನ್‌ಗಳಾದ ರೇವಣ ಸಿದ್ದಪ್ಪ ಕೆ, ಜಿ.ಪಿ. ರಾಮನಾಥ, ದಾವಣಗೆರೆ ಅಗ್ನಿಶಾಮಕ ಠಾಣೆಯ ಫೈರ್‌ಮನ್‌ಗಳಾದ ಹರಪನಹಳ್ಳಿ ತಾಲ್ಲೂಕು ಸಿಂಗ್ರಿಹಳ್ಳಿ ದೊಡ್ಡ ತಾಂಡಾದ ಅಶೋಕ ನಾಯ್ಕ್ ಹಾಗೂ ದಾವಣಗೆರೆಯ ಎಸ್‌.ಕೆ. ರಾಜೇಶ್ ಮುಖ್ಯಮಂತ್ರಿ ಪದಕಕ್ಕೆ ಭಾಜನರಾದವರು.

ಜುಲೈ 13ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿಇವರಿಗೆ ₹ 5 ಸಾವಿರ ಪ್ರೋತ್ಸಾಹ ಧನ ಹಾಗೂ ಪದಕ ಪ್ರದಾನ ಮಾಡಲಾಗುವುದು.

ADVERTISEMENT

ಬಸವಪ್ರಭು ಶರ್ಮ ಅವರು 2018ರಲ್ಲಿ ಧಾರವಾಡದಲ್ಲಿ ಕಟ್ಟಡ ಕುಸಿತದಲ್ಲಿ ಹಲವರ ರಕ್ಷಣೆ ಸೇರಿ ಹಲವು ಕಾರ್ಯಗಳನ್ನು ಗುರುತಿಸಿ ಪದಕ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.