ADVERTISEMENT

ಟಿಪ್ಪು ಸುಲ್ತಾನ್‌ ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 7:43 IST
Last Updated 11 ನವೆಂಬರ್ 2021, 7:43 IST
ದಾವಣಗೆರೆ ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಟಿಪ್ಪು ಸುಲ್ತಾನ್‌ ಅವರ 271ನೇ ಜನ್ಮಾದಿನ ಆಚರಣೆಯಲ್ಲಿ ಇಸ್ಮತ್ ಪಜೀರ್ ಅವರ ‘ಟಿಪ್ಪು ಸುಲ್ತಾನ’ ಕೃತಿ ಬಿಡುಗಡೆ ಮಾಡಲಾಯಿತು
ದಾವಣಗೆರೆ ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಟಿಪ್ಪು ಸುಲ್ತಾನ್‌ ಅವರ 271ನೇ ಜನ್ಮಾದಿನ ಆಚರಣೆಯಲ್ಲಿ ಇಸ್ಮತ್ ಪಜೀರ್ ಅವರ ‘ಟಿಪ್ಪು ಸುಲ್ತಾನ’ ಕೃತಿ ಬಿಡುಗಡೆ ಮಾಡಲಾಯಿತು   

ದಾವಣಗೆರೆ: ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಟಿಪ್ಪು ಸುಲ್ತಾನ್‌ 271ನೇ ಜನ್ಮಾದಿನವನ್ನು ಬುಧವಾರ ಯೂನಿಯನ್‌ ಕಚೇರಿ ಸಭಾಂಗಣದಲ್ಲಿ ಆಚರಿಸಲಾಯಿತು.

ಇಸ್ಮತ್ ಪಜೀರ್ ಅವರ ‘ಟಿಪ್ಪು ಸುಲ್ತಾನ’ ಸುಳ್ಳು ಮತ್ತು ಸತ್ಯಗಳ ವಿಮರ್ಶಾ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಬೀಡಿ ಕಾರ್ಮಿಕ ಮಹಿಳೆಯರು ತಮ್ಮ ಮಕ್ಕಳಿಗೆ ಈ ಪುಸ್ತಕವನ್ನು ಓದಿಸುವ ಜೊತೆಗೆ ತಾವು ಕೂಡ ಅರ್ಥವನ್ನುಕೊಳ್ಳಬೇಕು. ಟಿಪ್ಪು ಅವರ ಸಾಧನೆ, ಕೊಡುಗೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಯೂನಿಯನ್‌ ಕಾರ್ಯದರ್ಶಿ ಕರಿಬಸಪ್ಪ ತಿಳಿಸಿದರು.

ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ, ಸದಸ್ಯರಾದ ನಾಹೇರ, ಹಸೀನ, ನೂರ್ ಫಾತೀಮ, ಶಾಹೀನ, ಫರೀದ ಬಾನು, ಖತ್ಮುನ್ನಿಸ, ಹೂರುನ್ನಿಸ ಅವರೂ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.