ADVERTISEMENT

ದಾವಣಗೆರೆಯಿಂದ ಶಿರಡಿ, ಮಂಗಳೂರು, ಶ್ರೀಶೈಲಕ್ಕೆ ಬಸ್‍

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 14:32 IST
Last Updated 19 ಫೆಬ್ರುವರಿ 2020, 14:32 IST
ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಿರಡಿ ಮತ್ತು ಶ್ರೀಶೈಲ ಹಾಗೂ ಮಂಗಳೂರಿಗೆ ಹೊರಡುವ ಬಸ್‌ಗಳಿಗೆ ಸಿದ್ದೇಶ್ವರ ಹೆಬ್ಬಾಳ್‌ ಚಾಲನೆ ನೀಡಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಿರಡಿ ಮತ್ತು ಶ್ರೀಶೈಲ ಹಾಗೂ ಮಂಗಳೂರಿಗೆ ಹೊರಡುವ ಬಸ್‌ಗಳಿಗೆ ಸಿದ್ದೇಶ್ವರ ಹೆಬ್ಬಾಳ್‌ ಚಾಲನೆ ನೀಡಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಕೆಎಸ್‌ಆರ್‌ಟಿಸಿ ದಾವಣಗೆರೆ ಘಟಕದಿಂದ ಶಿರಡಿ ಹಾಗೂ ಮಂಗಳೂರಿಗೆ ನಾನ್‌ ಎಸಿ ಸ್ಲೀಪರ್‌ ಹಾಗೂ ಶ್ರೀಶೈಲಕ್ಕೆ ವೇಗದೂತ ಸಾರಿಗೆಯನ್ನು ಆರಂಭಿಸಲಾಯಿತು.

ನಾನ್‌ ಎಸಿ ಸ್ಲೀಪರ್‌ ಬಸ್‌ ದಾವಣಗೆರೆಯಿಂದ ಶಿರಡಿಗೆ ಸಂಜೆ 5.15ಕ್ಕೆ ಹೊರಟು ಹರಿಹರ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ಕೊಲ್ಲಾಪುರ, ಪೂನಾ, ಅಹಮದ್‍ನಗರ ಮಾರ್ಗವಾಗಿ ಮರುದಿನ ಬೆಳಿಗ್ಗೆ 7.45ಕ್ಕೆ ಶಿರಡಿ ತಲುಪಲಿದೆ. ಹಾಗೂ ಸಂಜೆ 5.15ಕ್ಕೆ ಶಿರಡಿಯಿಂದ ಹೊರಟು ಅದೇ ಮಾರ್ಗವಾಗಿ ಮರುದಿನ ಬೆಳಿಗ್ಗೆ 7.45ಕ್ಕೆ ದಾವಣಗೆರೆ ತಲುಪುವುದು.

ದಾವಣಗೆರೆಯಿಂದ ಮಂಗಳೂರಿಗೆ ಹೋಗುವ ಬಸ್‌ ರಾತ್ರಿ 9.30ಕ್ಕೆ ಹೊರಟು ಹರಿಹರ, ಶಿವಮೊಗ್ಗ, ಕುಂದಾಪುರ, ಮಣಿಪಾಲ, ಉಡುಪಿ ಮಾರ್ಗವಾಗಿ ಬೆಳಿಗ್ಗೆ 6ಕ್ಕೆ ಮಂಗಳೂರಿಗೆ ತಲುಪಲಿದೆ. ಮಂಗಳೂರಿನಿಂದ ರಾತ್ರಿ 10.30ಕ್ಕೆ ಹೊರಟು ಅದೇ ಮಾರ್ಗವಾಗಿ ಬೆಳಿಗ್ಗೆ 6.30ಕ್ಕೆ ದಾವಣಗೆರೆ ತಲುಪಲಿದೆ.

ADVERTISEMENT

ದಾವಣಗೆರೆಯಿಂದ ಶ್ರೀ ಶೈಲಕ್ಕೆ ಹೋಗುವ ಬಸ್ ಸಂಜೆ 4.30ಕ್ಕೆ ಹೊರಟು ಹರಿಹರ, ಹರಪನಹಳ್ಳಿ, ಹೊಸಪೇಟೆ, ಬಳ್ಳಾರಿ ಕರ್ನೂಲ್, ಡೋರ್ನಾಳು, ಆತ್ಮಕೂರು ಮಾರ್ಗವಾಗಿ ಶ್ರೀಶೈಲವನ್ನು ಮರುದಿನ ಬೆಳಿಗ್ಗೆ 5.45ಕ್ಕೆ ತಲುಪಲಿದೆ. ಮತ್ತು ಬೆಳಿಗ್ಗೆ 5.35ಕ್ಕೆ ಶ್ರೀಶೈಲದಿಂದ ಹೊರಟು ಅದೇ ಮಾರ್ಗವಾಗಿ ಮರುದಿನ ಬೆಳಿಗ್ಗೆ 6.45ಕ್ಕೆ ದಾವಣಗೆರೆ ತಲುಪಲಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ದಾವಣಗೆರೆ ಬಸ್ ನಿಲ್ದಾಣದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಚಾಲನೆ ನೀಡಿದರು. ಮಹಾನಗರಪಾಲಿಕೆ ನೂತನ ಮೇಯರ್ ಬಿ.ಜಿ.ಅಜಯ್ ಕುಮಾರ್, ಉಪ ಮೇಯರ್ ಸೌಮ್ಯ ಎಸ್.ನರೇಂದ್ರಕುಮಾರ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್‌, ಡಿಟಿಒ ಮಂಜುನಾಥ್, ಡಿಪೊ ಮ್ಯಾನೇಜರ್ ಎಂ. ರಾಮಚಂದ್ರಪ್ಪ, ಲೆಕ್ಕಾಧಿಕಾಧಿಕಾರಿ ದಿನೇಶ್ ಇತರೆ ಅಧಿಕಾರಿಗಳು ಇದ್ದರು.

ಪ್ರಯಾಣ ದರ ಎಷ್ಟು

ದಾವಣಗೆರೆಯಿಂದ ಶಿರಡಿಗೆ ₹1,000,ದಾವಣಗೆರೆಯಿಂದ ಶ್ರೀಶೈಲಕ್ಕೆ ₹652,ದಾವಣಗೆರೆಯಿಂದ ಮಂಗಳೂರಿಗೆ ₹450.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.