ದಾವಣಗೆರೆ: ಇಲ್ಲಿನ ತರಳಬಾಳು ಬಡಾವಣೆಯ ಬಾಲಾಜಿ ಏಜೆನ್ಸಿಯ ಬಾಗಿಲು ಮುರಿದ ಕಳ್ಳರು, ಐಟಿಸಿ ಕಂಪನಿಯ ₹18 ಲಕ್ಷ ಮೌಲ್ಯದ ಸಿಗರೇಟ್ ಕಳವು ಮಾಡಿದ್ದಾರೆ.
ಸಿಗರೇಟ್, ಬಿಸ್ಕತ್ ಮೊದಲಾದ ಸರಕುಗಳು ಸೋಮವಾರ ಏಜೆನ್ಸಿಗೆ ಬಂದಿದ್ದವು. ಆ ಪೈಕಿ ಕೆಲವು ಸರಕುಗಳನ್ನು ಮಾರಾಟ ಮಾಡಿ ಎಂದಿನಂತೆ ಸಂಜೆ ಮಳಿಗೆಗೆ ಬೀಗ ಹಾಕಿ ಹೋಗಲಾಗಿತ್ತು. ಮಂಗಳವಾರ ಬೆಳಿಗ್ಗೆ ಬಂದು ನೋಡಿದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ.
‘ಬಾಗಿಲು ಮುರಿದು 12 ಸಿಗರೇಟ್ ಬಾಕ್ಸ್ಗಳು ಹಾಗೂ ಮಳಿಗೆಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದ ಡಿ.ವಿ.ಆರ್ ಅನ್ನು ಕಿತ್ತುಕೊಂಡು ಹೋಗಿದ್ದಾರೆ’ ಎಂದು ಐಟಿಸಿ ಕಂಪನಿ ವಿತರಕ ಸಂತೋಷ್ಕುಮಾರ್ ಅವರು ವಿದ್ಯಾನಗರ ಠಾಣೆಗೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.