ದಾವಣಗೆರೆ: ಇಂಗ್ಲೆಂಡ್ ಮತ್ತು ಆಫ್ರಿಕಾ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದಂತೆ ಬುಧವಾರ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರನ್ನು ಬಸವನಗರ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜಪೇಟೆಯ ಸತೀಶ್ ಅಲಿಯಾಸ್ ಜಮ್ಮನಹಳ್ಳಿ ಸತೀಶ್ (40), ಮುಖೇಶ್ ಅಲಿಯಾಸ್ ಮುಖ್ಯ(41) ಬಂಧಿತ ಆರೋಪಿಗಳು. ಚಾಮರಾಜಪೇಟೆ ಸರ್ಕಲ್ನ ನಯನ ಹೋಟೆಲ್ ಬಳಿ ಮೊಬೈಲ್ ಆ್ಯಪ್ ಬಳಸಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ₹ 31,500 ಮತ್ತು ಎರಡು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ನಾರಾಯಣ್ ರಾಜ್, ದುರ್ಗಾ ರಾವ್, ನಾರಾಯಣ್ ರಾವ್, ದಾವಣಗೆರೆ ಶ್ಯಾಮ ಮತ್ತು ಹುಬ್ಬಳ್ಳಿಯ ಪ್ರಕಾಶ್ ತಪ್ಪಿಸಿಕೊಂಡಿದ್ದಾರೆ ಎಂದು ಬಸವನಗರ ಎಸ್ಐ ನಾಗರಾಜ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.