ADVERTISEMENT

ಅನ್ನಪ್ರಸಾದ ವ್ಯರ್ಥಮಾಡಬೇಡಿ: ಸಾಣೇಹಳ್ಳಿ ಶ್ರೀ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 14:34 IST
Last Updated 20 ಜನವರಿ 2019, 14:34 IST
ಮಲೇಬೆನ್ನೂರು ಸಮೀಪದ ಕುಂಬಳೂರಿನ ಬಸವಗುರುಕುಲದ ಶಾಲಾ ವಾರ್ಷೀಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತುಪ್ರದರ್ಶನವನ್ನು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವೀಕ್ಷಿಸಿದರು
ಮಲೇಬೆನ್ನೂರು ಸಮೀಪದ ಕುಂಬಳೂರಿನ ಬಸವಗುರುಕುಲದ ಶಾಲಾ ವಾರ್ಷೀಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತುಪ್ರದರ್ಶನವನ್ನು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವೀಕ್ಷಿಸಿದರು   

ಮಲೇಬೆನ್ನೂರು: ಮಕ್ಕಳು ವಿವಿಧ ಕಾರಣಗಳಿಂದ ದಾರಿ ತಪ್ಪುತ್ತಿದ್ದು, ಪೋಷಕರು, ಶಿಕ್ಷಕರು ಎಚ್ಚರವಹಿಸಿ ಅವರನ್ನು ಸರಿದಾರಿಗೆ ತನ್ನಿ ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ಸಮೀಪದ ಕುಂಬಳೂರಿನ ಬಸವ ಗುರುಕುಲದ ಶಾಲಾ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬ ಮಕ್ಕಳಲ್ಲಿ ಅಂತರಂಗದ ಜ್ಞಾನ ಇರುತ್ತದೆ. ಸಮರ್ಪಕವಾಗಿ ಬಳಸಿದರೆ ಒಳಿತಾಗುತ್ತದೆ ಎಂದರು.

ADVERTISEMENT

ಮನೆ, ಶಾಲೆ, ಕಲ್ಯಾಣ ಮಂದಿರ ಎಲ್ಲಿಯೇ ಆದರೂ ಅನ್ನ ಪ್ರಸಾದ ವ್ಯರ್ಥಮಾಡಬೇಡಿ. ಪ್ರಸಾದವನ್ನು ತಿನ್ನುವ ಹಕ್ಕು ಇದೆಯೇ ಹೊರತು, ವ್ಯರ್ಥಮಾಡಲು ಅಲ್ಲ ಎಂದು ತಿಳಿಸಿದರು.

ಕೆ. ತೀರ್ಥಪ್ಪ ಅಧ್ಯಕತೆ ವಹಿಸಿದ್ದರು. ಶಿಕ್ಷಕ ಹೂಗಾರ್, ಡಾ. ಬಿ. ಚಂದ್ರಶೇಖರ್ ಬಿಇಒ ನರಸಿಂಹಪ್ಪ, ವಕೀಲ ಎಚ್.ಬಿ. ಶಿವಕುಮಾರ್ ಮಾತನಾಡಿದರು.

ವಿದ್ಯಾರ್ಥಿಗಳ ವಿಜ್ಞಾನ ವಸ್ತುಪ್ರದರ್ಶನ ಜನಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಪೋಷಕರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.