ADVERTISEMENT

ದಾವಣಗೆರೆ: ₹ 3.62 ಲಕ್ಷ ಮೌಲ್ಯದ ಸ್ಫೋಟಕ ವಶ, ನಾಲ್ವರ ಬಂಧನ

ವಾಹನದಲ್ಲಿ ತುಂಬಿಕೊಂಡು ಹೋಗುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2021, 18:28 IST
Last Updated 21 ಮಾರ್ಚ್ 2021, 18:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ತಾಲ್ಲೂಕಿನ ಕಾಡಜ್ಜಿ ಗ್ರಾಮದ ದುರ್ಗಾದೇವಿ ಎಕ್ಸ್‌ಪ್ಲೋಸಿವ್ ಮ್ಯಾಗಜಿನ್‌ ಬಳಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ವೇಳೆ ದಾಳಿನಡೆಸಿದ ಪೊಲೀಸರು ₹ 3.62 ಲಕ್ಷ ಮೌಲ್ಯದ ಸ್ಫೋಟಕಗಳನ್ನು ವಶಪಡಿಸಿಕೊಂಡು, ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.

ಬಿ.ಎಸ್. ವಿಕ್ರಮ್, ನಾಗರಾಜ್, ವಿಜಯಕುಮಾರ್ ಹಾಗೂ ಮಂಜುನಾಥ ಬಂಧಿತರು. ಆರೋಪಿಗಳು ಬೊಲೆರೊ ಪಿಕ್‌ಅ‍ಪ್‌ ವಾಹನದಲ್ಲಿ ಸ್ಫೋಟಕಗಳನ್ನು ತುಂಬಿಕೊಂಡು ಹೋಗುತ್ತಿದ್ದಾಗಡಿವೈಎಸ್‌ಪಿ ನರಸಿಂಹ ವಿ.ತಾಮ್ರಧ್ವಜ ನೇತೃತ್ವದಲ್ಲಿ ಎಎಸ್‌ಸಿ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಬಂಧಿತರಿಂದ ಐಡಿಯಲ್ ಪೌಡರ್–90 ಎಕ್ಸ್‌ಪ್ಲೋಸಿವ್ ಜಿಲೆಟಿನ್‌ಗಳು, 7400 ಎಲೆಕ್ಟ್ರಿಕ್ ಡಿಟೊನೇಟರ್, ಪೌಡರ್ ಕಾರ್ಡ್ ಸೇಫ್ಟಿ ಫ್ಯೂಜ್, 50 ಕೆ.ಜಿ.ಯ ಆಪ್ಟೆಕ್ಸ್ ಅಮೋನಿಯಂ ನೈಟ್ರೇಟ್ ಪೌಡರ್‌ ತುಂಬಿದ 5 ಚೀಲಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ADVERTISEMENT

ಗೋದಾಮಿನ ಮಾಲೀಕ ಷಣ್ಮುಖಪ್ಪ ಹಾಗೂ ಮುಜಿಬ್ ಅವರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.