ದಾವಣಗೆರೆ: ಹರಿಹರ ತಾಲ್ಲೂಕಿನ ಅಮರಾವತಿಯ ಪ್ರಭುಗೌಡ ಅವರ ಮನೆಯಲ್ಲಿ ಆಗಸ್ಟ್ 21ರಂದು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಮೂವರನ್ನು ಬಂಧಿಸಿ ₹1ಲಕ್ಷ ಮೌಲ್ಯದ ವಡವೆಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮದ ಹೊನ್ನೂರ್ ಸಾಬ್, ಸುಭಾನ್ ಸಾಬ್ ಹಾಗೂ ಸಂತೋಷ ಬಂಧಿತರು.
ಮಂಗಳವಾರ ಬೆಳಿಗ್ಗೆ ಹರಿಹರ ಬೈಪಾಸ್ ಬಳಿ ಗಸ್ತಿನಲ್ಲಿದ್ದ ಪೊಲೀಸರುಈ ಮೂವರನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ17 ಗ್ರಾಂ ಬಂಗಾರದ ಆಭರಣ, 3 ಬೆಳ್ಳಿಯ ಬ್ರಾಸ್ಲೆಟ್, ಒಂದು ದೇವಸ್ಥಾನದ ಗಂಟೆ, ಬೆಳ್ಳಿ ಕರಡಿಗೆ ಹಾಗೂ ₹3770 ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಡಿಎಸ್ಪಿ ರಾಜೀವ್, ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಅವರ ಮಾರ್ಗದರ್ಶನದಲ್ಲಿ ಹರಿಹರ ಸಿಪಿಐ ಎಂ.ಶಿವಪ್ರಸಾದ್ ನೇತೃತ್ವದಲ್ಲಿ ಗ್ರಾಮಾಂತರ ಠಾಣಾ ಸಿಪಿಐ ಎಂ.ಶಿವಪ್ರಸಾದ್, ಪಿಎಸ್ಐ ರವಿಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಪತ್ತೆ ಕಾರ್ಯದಲ್ಲಿ ಮಹ್ಮದ್ ಸೈಫುದ್ದೀನ್, ಯಾಸೀನುಲ್ಲಾ, ರವಿ,ವೆಂಕಟೇಶ, ದ್ವಾರಕೀಶ ಹಾಗೂ ಸತೀಶ ಅವರಿಗೆ ಎಸ್ಪಿಯವರುಬಹುಮಾನ ಘೋಷಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.