ADVERTISEMENT

‘ಮಾಡಿದ ಕೆಲಸಗಳಿಂದ ಉಳಿಯುತ್ತದೆ ಹೆಸರು’

ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿ ಸ್ಥಾಪನೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 5:44 IST
Last Updated 6 ಡಿಸೆಂಬರ್ 2021, 5:44 IST
ದಾವಣಗೆರೆಯ ಚಿಕ್ಕಮ್ಮಣಿ ಬಡಾವಣೆಯಲ್ಲಿ ಚಿತ್ರನಟ ಪುನೀತ್‌ ರಾಜಕುಮಾರ್‌ ಅವರ ಪುತ್ಥಳಿ ಅನಾವರಣಗೊಳಿಸಲಾಯಿತು
ದಾವಣಗೆರೆಯ ಚಿಕ್ಕಮ್ಮಣಿ ಬಡಾವಣೆಯಲ್ಲಿ ಚಿತ್ರನಟ ಪುನೀತ್‌ ರಾಜಕುಮಾರ್‌ ಅವರ ಪುತ್ಥಳಿ ಅನಾವರಣಗೊಳಿಸಲಾಯಿತು   

ದಾವಣಗೆರೆ: ‘ಹುಟ್ಟಿದ ಮನುಷ್ಯ ಒಂದು ದಿನ ಸಾಯುತ್ತಾನೆ. ಹುಟ್ಟು–ಸಾವುಗಳ ನಡುವಿನ ಜೀವಿತಾವಧಿಯಲ್ಲಿ ಆತ ಮಾಡಿದ ಕೆಲಸಗಳೇ ಸಾವಿನ ನಂತರವೂ ಹೆಸರನ್ನು ಉಳಿಸುತ್ತವೆ. ಅದಕ್ಕೆ ಪುನೀತ್‌ ರಾಜ್‌ಕುಮಾರ್‌ ದೊಡ್ಡ ಉದಾಹರಣೆ’ ಎಂದು ಮೇಯರ್‌ ಎಸ್‌.ಟಿ. ವೀರೇಶ್‌ ಹೇಳಿದರು.

ನಗರದ ಚಿಕ್ಕಮ್ಮಣ್ಣಿ ದೇವರಾಜ ಅರಸು ಬಡಾವಣೆಯಲ್ಲಿ ಸಿದ್ಧರಾಮೇಶ್ವರ ಯುವಕ ಸಂಘ, ಸಿದ್ಧಿ ವಿನಾಯಕ ಯುವಕರ ಸಂಘ, ಮಾರಿಕಾಂಬ ಯುವಕ ಸಂಘದ ಆಶ್ರಯದಲ್ಲಿ ಅಪ್ಪು ಅಭಿಮಾನಿಗಳ ಬಳಗ ಆಯೋಜಿಸಿದ್ದ ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ಉಸಿರು ನಿಂತ ನಂತರವೂ ಹೆಸರು ಉಳಿಯುವ ರೀತಿಯಲ್ಲಿ ಸೇವೆ ಮಾಡಬೇಕು. ಪುನೀತ್‌ ರಾಜ್‌ಕುಮಾರ್‌ ಬಲಗೈಯಲ್ಲಿ ಕೊಟ್ಟಿರುವುದು ಎಡಗೈಗೆ ಗೊತ್ತಾಗಬಾರದು ಎಂದು ಸೇವೆ ಮಾಡಿ
ದ್ದರು. ಪುನೀತ್‌ ಎಲ್ಲರಿಗೂ ಆದರ್ಶವಾಗಬೇಕು’ ಎಂದು ತಿಳಿಸಿದರು.

ADVERTISEMENT

ಸಮನ್ವಯ ಸಮಿತಿಯ ಮುಪ್ಪಣ್ಣ ಮಾತನಾಡಿದರು.

ವಿವಿಧ ಸಂಘಟನೆಗಳ ಮುಖಂಡ
ರಾದ ಎಚ್. ತಿಮ್ಮಣ್ಣ, ವೀರೇಶ್, ಶ್ರೀನಿವಾಸ್, ಎಚ್.ನಾಗರಾಜ್, ಎಚ್.ಎನ್. ರಾಜಪ್ಪ, ಮಾನಸ ತಿಪ್ಪೆಸ್ವಾಮಿ, ಎಲ್‍ಐಸಿ ಹನುಮಂತಪ್ಪ, ಎಸ್.ವಿ.ಈಶ್ವರ್, ಮುತ್ತುರಾಜ, ಲೋಕೇಶಪ್ಪ, ನಾಗರಾಜ್, ಕೆ.ಪಿ. ನಿರಂಜನ್, ಆನಂದ್ ಇದ್ದರು. ಸ್ಥಳೀಯ ಉದ್ಯಾನಕ್ಕೆ ಪುನೀತ್ ರಾಜ್‍ಕುಮಾರ್ ಉದ್ಯಾನ ಎಂದು ನಾಮಕರಣ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.