ADVERTISEMENT

ದಾವಣಗೆರೆ: ಧೂಡಾ ನಿವೇಶನಕ್ಕೆ ಕೊನೇ ದಿನ ಅರ್ಜಿಗಳ ಮಹಾಪೂರ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 6:20 IST
Last Updated 5 ಸೆಪ್ಟೆಂಬರ್ 2021, 6:20 IST
ನಿವೇಶನಕ್ಕೆ ಅರ್ಜಿ ಸಲ್ಲಿಸುವ ಕೊನೇ ದಿನವಾದ ಶನಿವಾರವೂ ದಾವಣಗೆರೆ–ಹರಿಹರ ನಗರಾಭಿವೃದ್ಧಿ ಕಚೇರಿ ಆವರಣದಲ್ಲಿ ಭಾರಿ ಸಂಖ್ಯೆಯಲ್ಲಿ ಅರ್ಜಿದಾರರು ಸರದಿಯಲ್ಲಿ ನಿಂತು ಅರ್ಜಿ ಸಲ್ಲಿಸಿದರು
ನಿವೇಶನಕ್ಕೆ ಅರ್ಜಿ ಸಲ್ಲಿಸುವ ಕೊನೇ ದಿನವಾದ ಶನಿವಾರವೂ ದಾವಣಗೆರೆ–ಹರಿಹರ ನಗರಾಭಿವೃದ್ಧಿ ಕಚೇರಿ ಆವರಣದಲ್ಲಿ ಭಾರಿ ಸಂಖ್ಯೆಯಲ್ಲಿ ಅರ್ಜಿದಾರರು ಸರದಿಯಲ್ಲಿ ನಿಂತು ಅರ್ಜಿ ಸಲ್ಲಿಸಿದರು   

ದಾವಣಗೆರೆ: ಕುಂದವಾಡದಲ್ಲಿ ಹೊಸ ಬಡಾವಣೆ ನಿರ್ಮಿಸಿ ನಿವೇಶನ ಹಂಚಲು ಕರೆಯಲಾಗಿದ್ದ ಅರ್ಜಿ ಸಲ್ಲಿಕೆಯ ಕೊನೇ ದಿನವಾದ ಶನಿವಾರ ಅರ್ಜಿ ಸಲ್ಲಿಸಲು ಜನರು ಮುಗಿಬಿದ್ದಿದ್ದರು. ರಾತ್ರಿ 8 ಗಂಟೆಯ ವರೆಗೆ ಅರ್ಜಿ ಸ್ವೀಕಾರ ನಡೆಯಿತು.

ಆ.11ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿತ್ತು. ಆ.26ಕ್ಕೆ ಮುಗಿಯಬೇಕಿತ್ತು. ದಿನೇ ದಿನೇ ಅರ್ಜಿ ಸಲ್ಲಿಸುವವರ ಸರತಿ ಸಾಲು ಉದ್ದವಾಗುತ್ತಾ ಹೋಗಿದ್ದರಿಂದ ಸೆ.4ರ ವರೆಗೆ ಅವಧಿ ವಿಸ್ತರಿಸಲಾಗಿತ್ತು. ಕೊನೇ ದಿನವಾದ ಶನಿವಾರ 1,500ಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದರು.

‘ಶನಿವಾರ ಅರ್ಜಿ ಸಲ್ಲಿಸಲು ಬಂದ ಯಾರನ್ನೂ ವಾಪಸ್‌ ಕಳುಹಿಸದೇ ಕೆಲಸ ಮಾಡಿದ್ದೇವೆ. ಒಟ್ಟು ಅರ್ಜಿಗಳ ಲೆಕ್ಕ ಸೋಮವಾರ ಸಿಗಲಿದೆ’ ಎಂದು ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಬಿ.ಟಿ. ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.