ADVERTISEMENT

ಸಂವಿಧಾನ ಮೊದಲು ಉಳಿಯಲಿ ಧರ್ಮ ಮಾನ್ಯತೆ ಆಮೇಲೆ ನೋಡೋಣ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 19:45 IST
Last Updated 12 ಸೆಪ್ಟೆಂಬರ್ 2019, 19:45 IST
ಕೋರಣೇಶ್ವರ ಸ್ವಾಮೀಜಿ
ಕೋರಣೇಶ್ವರ ಸ್ವಾಮೀಜಿ   

ದಾವಣಗೆರೆ: ಲಿಂಗಾಯತರು ಪ್ರತ್ಯೇಕ ಧರ್ಮ ಮಾನ್ಯತೆಗೆ ಹೋರಾಡುವುದಕ್ಕಿಂತ ಮೊದಲು ಸಂವಿಧಾನ ಉಳಿವಿಗೆ ಹೋರಾಡಲು ಮುಂದಾಗಬೇಕು ಎಂದು ರಾಷ್ಟ್ರೀಯ ಲಿಂಗಾಯತ ಮೋರ್ಚಾ ಅಧ್ಯಕ್ಷ ಲಾತೂರ್‌ನ ಉಸ್ತುರಿಯ ಕೋರಣೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಗುರುವಾರ ಬಹುಜನ ಕ್ರಾಂತಿ ಮೋರ್ಚಾ ಹಮ್ಮಿಕೊಂಡಿದ್ದ ಎವಿಎಂ ಹಗರಣ ಬಯಲು ಮಾಡಲು ನಡೆಯುತ್ತಿರುವ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂವಿಧಾನ ಬದಲಾವಣೆ ಮಾತು ಇಂದು ಹೆಚ್ಚು ಕೇಳಿಬರುತ್ತಿದೆ. ಸಂವಿಧಾನವೇ ಹೋದರೆ ಪ್ರತ್ಯೇಕ ಧರ್ಮದ ಮಾನ್ಯತೆ ಹೇಗೆ ಸಿಗುತ್ತದೆ ಎಂದು ಪ್ರಶ್ನಿಸಿದ ಅವರು, ‘ಇಂದು ದಿನಕ್ಕೊಂದು ಕಾನೂನು ಬರುತ್ತಿದೆ. ಸಂವಿಧಾನ ಅಪಾಯದಲ್ಲಿದೆ. ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ದಮನ ಮಾಡುವ ಮನು ಪ್ರೇರಿತ ಸಂವಿಧಾನ ಬರುವ ಅಪಾಯ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಹಕ್ಕುಗಳಿಗಾಗಿ ಸಮುದಾಯಗಳು ಪ್ರತ್ಯೇಕವಾಗಿ ಹೋರಾಡುವುದಕ್ಕಿಂತ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.