ದಾವಣಗೆರೆ: ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ಬಿಡುಗಡೆ ಮಾಡಲು ರೈತರೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ದಾವಣಗೆರೆ ವಲಯದ ವಿಶೇಷ ಭೂಸ್ವಾಧೀನಾಧಿಕಾರಿ ಜಿ.ಡಿ. ಶೇಖರ್ ಹಾಗೂ ಅಧೀನ ಸಿಬ್ಬಂದಿ ಶಿರಸ್ತೇದಾರ್ ಶ್ರೀನಿವಾಸ ವಿ.ಎ. ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹಾವೇರಿ ತಾಲ್ಲೂಕಿನ ಕೋಳೂರು ಗ್ರಾಮದ ರೈತ ಸಂತೋಷ್ ಗುಡ್ಡಪ್ಪನವರ್ ಅವರ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದು, ಪರಿಹಾರ ಕೊಡಿಸಲು ₹ 30,000 ಲಂಚದ ಬೇಡಿಕೆ ಇರಿಸಿದ್ದರು. ಶುಕ್ರವಾರ ಸಂಜೆ ತಮ್ಮ ಕಚೇರಿಯಲ್ಲಿ ಸಂತೋಷ್ ಅವರಿಂದ ಲಂಚ ಪಡೆಯುವ ವೇಳೆ ಲೋಕಾಯುಕ್ತರು ದಾಳಿ ನಡೆಸಿ ಬಂಧಿಸಿದ್ದಾರೆ.
ದಾವಣಗೆರೆ ಲೋಕಾಯುಕ್ತ ಘಟಕದ ಎಸ್.ಪಿ ಎಂ.ಎಸ್. ಕೌಲಾಪುರೆ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರಾಮಕೃಷ್ಣ ಕೆ.ಜಿ., ಇನ್ಸ್ಪೆಕ್ಟರ್ಗಳಾದ ರಾಷ್ಟ್ರಪತಿ ಎಚ್.ಎಸ್., ಆಂಜನೇಯ ಎನ್.ಎಚ್., ಹೆಡ್ ಕಾನ್ಸ್ಟೆಬಲ್ ಆರ್.ಆರ್. ಚಂದ್ರಶೇಖರ್, ಸಿಬ್ಬಂದಿಯಾದ ಆಂಜನೇಯ ವಿ.ಎಚ್., ಸುರೇಶ್ ಎಂ.ರಾಣೇಬೆನ್ನೂರು, ಎಸ್.ಎಂ. ವೀರೇಶಯ್ಯ, ಆಶಾ, ಧನರಾಜ್ ಎನ್. ಲಿಂಗೇಶ್ ಎಸ್.ಎಸ್. ಮುಜೀಬ್ ಖಾನ್, ಜಂಷೀದಾ ಖಾನಂ, ಬಸವರಾಜ ಡಿ., ಮೋಹನ್ ಕುಮಾರ್ ದಾಳಿಯ ವೇಳೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.