ಸಂತೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿಬುಧವಾರ ಧಾರಾಕಾರ ಮಳೆಯಾಯಿತು. ಗುಡುಗು ಸಹಿತ ಮಳೆಯಾಗಿದ್ದು, ಕೃಷಿ ಚಟುವಟಿಕೆಗೆ ವಿರಾಮ ನೀಡಿದೆ.
ದೊಡ್ಡಘಟ್ಟ ಹಾಗೂ ಚಿರಡೋಣಿ ನಡುವೆ ಸೂಳೆಕೆರೆ ಹಳ್ಳದ ರಭಸಕ್ಕೆ ಸೇತುವೆ ದಾಟುತ್ತಿದ್ದಾಗ ಪಡಿತರ ರಾಗಿ ತುಂಬಿದ್ದ ಲಾರಿ ಉರುಳಿ ಬಿದ್ದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಸಂತೇಬೆನ್ನೂರಿನ ಕೋಟೆ ರಸ್ತೆ ಭಾಗದಲ್ಲಿ ಮೂರು ಮನೆಗಳ ಗೋಡೆ ಕುಸಿದಿವೆ. ಹಿರೇಕೊಗಲೂರಿನಲ್ಲಿ ಒಂದು ಮನೆಗೆ ಹಾನಿಯಾಗಿದೆ.
ಮಹಮದ್ ಇಸ್ಮಾಯಿಲ್ ಎಂಬುವವರ ಮನೆಯ ಮಹಡಿ ಗೋಡೆ ಸಂಪೂರ್ಣ ಕುಸಿದಿದೆ. ಸುಜಾತ ಲಕ್ಷ್ಮಣಪ್ಪ, ಗಂಗಮ್ಮ ಕರಿಯಪ್ಪ ಅವರ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮಳೆಯಿಂದ ಮೆಕ್ಕೆಜೋಳ ತೆನೆ ಮುರಿಯುವ ಕಾರ್ಯಕ್ಕೆ ಹಿನ್ನಡೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.