ADVERTISEMENT

ವಿವಾಹಿತ ಮಹಿಳೆಯ ಕೊಲೆ: ಪ್ರಿಯಕರ ಪೊಲೀಸ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 16:01 IST
Last Updated 29 ಡಿಸೆಂಬರ್ 2020, 16:01 IST

ಹರಿಹರ: ಇಲ್ಲಿನ ಗ್ರಾಮದೇವತೆ ದೇವಸ್ಥಾನದ ನರ್ತಕಿ ಬಾರ್‌ ಬಳಿ ವಿವಾಹಿತ ಮಹಿಳೆಯನ್ನು ಮಂಗಳವಾ ಇರಿದು ಕೊಲೆ ಮಾಡಲಾಗಿದೆ. ಆಕೆಯ ಪ್ರಿಯಕರ ಎನ್ನಲಾದ ಚೇತನ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹರಿಹರಕುರುಬರ ಕೇರಿ ಮದ್ದಮ್ಮ ದೇವಸ್ಥಾನದ ಬಳಿ ನಿವಾಸಿ ರೇಖಾ (25) ಕೊಲೆಯಾದ ಮಹಿಳೆ. ಈಕೆಗೆ ನಾಗರಾಜ್‌ ಎಂಬವರ ಜತೆಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಹರಿಹರ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT