ADVERTISEMENT

ಮೇ 8ರಂದು ಯುಗಾದಿ ಸಂಭ್ರಮ ರಾಜ್ಯಮಟ್ಟದ ಕವಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 4:14 IST
Last Updated 13 ಏಪ್ರಿಲ್ 2022, 4:14 IST

ಹರಿಹರ: ಇಲ್ಲಿನ ಚಿಂತನ ಪ್ರತಿಷ್ಠಾನ ಮತ್ತು ಪಂಡಿತ್ ಪುಟ್ಟರಾಜ ಸೇವಾ ಸಮಿತಿಯಿಂದ ನಗರದ ಮರಿಯ ಸದನದಲ್ಲಿ ಮೇ 8ರಂದು ರಾಜ್ಯಮಟ್ಟದ ಕವಿ, ಕಾವ್ಯ ಸಮ್ಮೇಳನದ ಅಂಗವಾಗಿ ಯುಗಾದಿ ಸಂಭ್ರಮ ರಾಜ್ಯಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ.

ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಆಸಕ್ತಿ ಇರುವ ಕವಿಗಳು ಸ್ವರಚಿತ ಕವನಗಳನ್ನು ಏ.25ರ ಒಳಗೆ ಸುಬ್ರಹ್ಮಣ್ಯ ನಾಡಿಗೇರ, ಅಧ್ಯಕ್ಷರು, ಚಿಂತನ ಪ್ರತಿಷ್ಠಾನ, ನಂ.194, ನಾಡಿಗೇರ ನಿಲಯ, ಕೋಟೆ, ಹರಿಹರ-577601, ದಾವಣಗೆರೆ. ಮೊ.ನಂ. 9242046726 ಈ ವಿಳಾಸಕ್ಕೆ ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸಬೇಕು. ಕವನಗಳು 20ರಿಂದ 25 ಸಾಲು ಮೀರಿರಬಾರದು. ಒಂದು ಕವನ ಆಯ್ಕೆ ಮಾಡಿ ಗೋಷ್ಠಿಯಲ್ಲಿ ವಾಚನ ಮಾಡಲು ಅವಕಾಶ ನೀಡಲಾಗುವುದು. ಆಯ್ಕೆಯಾದ ಕವನ ವಾಚನ ಮಾಡಲು ಕವಿ ತಮ್ಮ ಕೈಬರಹ ಅಥವಾ ಮುದ್ರಿತ ಪ್ರತಿಯನ್ನು ತರಬೇಕು. ಮೊಬೈಲ್ ನೋಡಿಕೊಂಡು ವಾಚನಕ್ಕೆ ಅವಕಾಶವಿಲ್ಲ.
ಕವನ ವಾಚನಕ್ಕೆ ಯಾವುದೇ ನೋಂದಣಿ ಶುಲ್ಕ ಇಲ್ಲ. ಭಾಗವಹಿಸುವ ಕವಿಗಳಿಗೆ ಸಂಸ್ಥೆಯಿಂದ ಸತ್ಕರಿಸಿ, ಅಭಿನಂದನಾ ಪತ್ರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT