ADVERTISEMENT

ಅಪಘಾತ: ಪ್ರಜಾವಾಣಿ ಹಾವೇರಿ ವರದಿಗಾರ ಮಂಜುನಾಥ್ ಸಾವು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 17:52 IST
Last Updated 20 ನವೆಂಬರ್ 2019, 17:52 IST
ಎಂ.ಸಿ. ಮಂಜುನಾಥ್
ಎಂ.ಸಿ. ಮಂಜುನಾಥ್   

ದಾವಣಗೆರೆ: ತಾಲ್ಲೂಕಿನ ಕೊಡಗನೂರು ಕೆರೆಯ ಬಳಿ ಬುಧವಾರ ರಾತ್ರಿ ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ‘ಪ್ರಜಾವಾಣಿ’ಯ ಹಾವೇರಿ ಜಿಲ್ಲಾ ಹಿರಿಯವರದಿಗಾರ ಎಂ.ಸಿ. ಮಂಜುನಾಥ್‌ (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹೊಳಲ್ಕೆರೆಯಲ್ಲಿರುವ ಅಕ್ಕನ ಮನೆಗೆ ಹಾವೇರಿಯಿಂದ ಬೈಕ್‌ನಲ್ಲಿ ಹೋಗುತ್ತಿದ್ದಾಗ ಹುಲ್ಲಿನ ಹೊರೆ ಹೇರಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದಿದೆ. ಟ್ರ್ಯಾಕ್ಟರ್‌ ಸಮೇತ ಚಾಲಕ ಪರಾರಿಯಾಗಿದ್ದಾನೆ.

ಶವವನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. ಮಂಜುನಾಥ್‌ ಅವರಿಗೆ ತಂದೆ, ತಾಯಿ ಹಾಗೂ ಅಣ್ಣ, ಅಕ್ಕ ಇದ್ದಾರೆ. ಅಂತ್ಯ ಸಂಸ್ಕಾರ ಗುರುವಾರ ಶಿವಮೊಗ್ಗದಲ್ಲಿ ನಡೆಯಲಿದೆ.

ADVERTISEMENT

–––

ಕನಕದಾಸರಜಯಂತಿ ಪ್ರಯುಕ್ತ ಮಂಜುನಾಥ್‌ಬರೆದಿದ್ದ ವಿಶೇಷ ಲೇಖನಗಳು

ಇತರ ಸ್ಟೋರಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.