ADVERTISEMENT

ಮಳೆಯ ಸಿಂಚನ

​ಪ್ರಜಾವಾಣಿ ವಾರ್ತೆ
Published 23 ಮೇ 2019, 13:06 IST
Last Updated 23 ಮೇ 2019, 13:06 IST

ದಾವಣಗೆರೆ: ಮತ ಎಣಿಕೆಯ ಕೊನೇಯ ಸುತ್ತು (19) ಮುಗಿಯುತ್ತಿದ್ದಂತೆ ಮಳೆ ಸುರಿಯಿತು. ಬಿಜೆಪಿಯ ಗೆಲುವಿಗೆ ಸಿಂಚನವಾಯಿತು ಎಂದು ಬಿಜೆಪಿ ನಾಯಕರು ಸಂಭ್ರಮಿಸಿದರು. ಬಿಸಿಲಲ್ಲಿ ಕಾಯುತ್ತಾ ನಿಂತಿದ್ದ ಪೊಲೀಸರು, ಭದ್ರತಾ ಪಡೆಗಳ ಸಿಬ್ಬಂದಿ ಮಳೆ ಬರುತ್ತಿದ್ದಂತೆ ನೀರು ಬೀಳದ ಜಾಗ ಹುಡುಕಿ ಹೋಗಬೇಕಾಯಿತು.

ಗುಡುಗು, ಮಿಂಚಿನೊಂದಿಗೆ ಅರ್ಧ ಗಂಟೆಗೂ ಹೆಚ್ಚು ಹೊತ್ತು ಮಳೆ ಸುರಿಯಿತು. ಅಲ್ಲಲ್ಲಿ ಹಾಕಿದ್ದ ಶಾಮಿಯಾನಗಳ ಅಡಿಗೆ ಆರಂಭದಲ್ಲಿ ಓಡಿದರು. ಶಾಮಿಯಾನಗಳೂ ಸೋರ ತೊಡಗಿದಾಗ ಕಟ್ಟಡಗಳ ಒಳಗೆ ಹೋಗಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT