ADVERTISEMENT

ಮಕ್ಕಳ ಪ್ರತಿಭೆ ಗುರುತಿಸಿ: ನಂದಕಿಶೋರ್

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 8:36 IST
Last Updated 13 ಜೂನ್ 2022, 8:36 IST
ದಾವಣಗೆರೆಯ ಚೈತನ್ಯ ಹೈ-ಟೆಕ್ ಇನ್ಸಿಟ್ಯೂಟ್ ಆಫ್ ಕಾಮರ್ಸ್ ಮ್ಯಾನೇಜ್‌ಮೆಂಟ್‌ ಅಂಡ್ ಸೈನ್ಸ್ ಕಾಲೇಜು ವತಿಯಿಂದ ಗುಂಡಿಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ‘ಚೈತನ್ಯ ಘೂಮರ್–-2ಕೆ22’ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲರಾದ ಪ್ರೀತಿ, ಅಧ್ಯಕ್ಷ ಅಭಿಷೇಕ್ ಬೇತೂರು, ಚಿತ್ರ ನಿರ್ದೇಶಕ ನಂದಕಿಶೋರ್‌, ರ‍್ಯಾಪರ್ ಚಂದನ್ ಶೆಟ್ಟಿ, ಡಿಕೆಡಿ ನೃತ್ಯ ನಿರ್ದೇಶಕ ಶಶಿ ಮಾಸ್ಟರ್ ಇದ್ದರು.
ದಾವಣಗೆರೆಯ ಚೈತನ್ಯ ಹೈ-ಟೆಕ್ ಇನ್ಸಿಟ್ಯೂಟ್ ಆಫ್ ಕಾಮರ್ಸ್ ಮ್ಯಾನೇಜ್‌ಮೆಂಟ್‌ ಅಂಡ್ ಸೈನ್ಸ್ ಕಾಲೇಜು ವತಿಯಿಂದ ಗುಂಡಿಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ‘ಚೈತನ್ಯ ಘೂಮರ್–-2ಕೆ22’ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲರಾದ ಪ್ರೀತಿ, ಅಧ್ಯಕ್ಷ ಅಭಿಷೇಕ್ ಬೇತೂರು, ಚಿತ್ರ ನಿರ್ದೇಶಕ ನಂದಕಿಶೋರ್‌, ರ‍್ಯಾಪರ್ ಚಂದನ್ ಶೆಟ್ಟಿ, ಡಿಕೆಡಿ ನೃತ್ಯ ನಿರ್ದೇಶಕ ಶಶಿ ಮಾಸ್ಟರ್ ಇದ್ದರು.   

ದಾವಣಗೆರೆ: ‘ಪ್ರತಿಯೊಬ್ಬ ಮಕ್ಕಳಲ್ಲೂ ಪ್ರತಿಭೆ ಅಡಗಿರುತ್ತದೆ. ಅದನ್ನು ಹೊರತರುವ ಕೆಲಸ ಮಾಡಬೇಕು’ ಎಂದು ಚಿತ್ರ ನಿರ್ದೇಶಕ ನಂದಕಿಶೋರ್ ಹೇಳಿದರು.

ಇಲ್ಲಿನ ಚೈತನ್ಯ ಹೈ-ಟೆಕ್ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್ ಮ್ಯಾನೇಜ್‌ಮೆಂಟ್ ಅಂಡ್ ಸೈನ್ಸ್ ಕಾಲೇಜು ವತಿಯಿಂದ ನಗರದ ಗುಂಡಿಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ‘ಚೈತನ್ಯ ಘೂಮರ್-2ಕೆ22’ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದಾವಣಗೆರೆ ನನಗೆ ಇದು ಅಚ್ಚುಮೆಚ್ಚು. ಇಲ್ಲಿನ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತೇನೆ. ಮಕ್ಕಳ ಪ್ರತಿಭೆ ಗುರುತಿಸಲು ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಚಿತ್ರನಟ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಈ ಕಾರ್ಯಕ್ರಮ ಮಾಡಿರುವುದರಿಂದ ಜನರು ನೆನಪಿಸಿಕೊಳ್ಳುತ್ತಾರೆ’ ಎಂದು ಹೇಳಿದರು.

ADVERTISEMENT

ರ‍್ಯಾಪರ್ ಚಂದನ್ ಶೆಟ್ಟಿ ಮಾತನಾಡಿ, ‘ಇಲ್ಲಿಯೇ ನನ್ನ ಕರಿಯರ್ ಆರಂಭಿಸಿರುವುದರಿಂದ ದಾವಣಗೆರೆ ನನಗೆ ಇಷ್ಟ. ಚೈತನ್ಯ ಕಾಲೇಜು ಕಲೆಗಳ ಮೂಲಕ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮೂಲಕ ಉತ್ತಮ ಕೆಲಸ ಮಾಡಿದೆ’ ಎಂದು ಹೇಳಿದರು.

ಪೊಗರು ಚಿತ್ರದ ಹಾಡಿಗೆ ನೃತ್ಯ ಮಾಡಿ ರಂಜಿಸಿದರು. ರಾಜ್ಯದ ಗದಗ್, ಬೀದರ್ ಹಾಗೂ ಕೋಲಾರ ಜಿಲ್ಲೆಗಳು ಸೇರಿ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸೊಲೊ ಹಾಗೂ ಸಮೂಹ ನೃತ್ಯಗಳು ನಡೆದವು.ಶಾಸಕ ಎಂ.ಪಿ.ರೇಣುಕಾಚಾರ್ಯ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.