ಬಸವನಹಳ್ಳಿ (ನ್ಯಾಮತಿ): ಗ್ರಾಮದ ಹೊರವಲಯದಲ್ಲಿರುವ ತುಂಗಾ ಮೇಲ್ದಂಡೆ ನಾಲೆಯನ್ನು ದುರಸ್ತಿ ಮಾಡಲಾಗಿದೆ.
ಈಚೆಗೆ ನಾಲೆ ಒಡೆದು ಅಪಾರ ಪ್ರಮಾಣದ ನೀರು ಜಮೀನುಗಳಿಗೆ ಹರಿದು ಬೆಳೆ ಹಾನಿಯಾಗಿತ್ತು.
ಒಂದು ವಾರ ದುರಸ್ತಿ ಕಾರ್ಯ ನಡೆದಿದ್ದು, ಈದ ನಾಲೆಯಲ್ಲಿ ನೀರು ಹರಿಯುತ್ತಿದೆ.
‘40 ಮೀಟರ್ ಉದ್ದದ ನಾಲೆ ಒಡೆದ ಸ್ಥಳದಲ್ಲಿ ಕಬ್ಬಿಣ, ಸಿಮೆಂಟ್ ಹಾಕಿ, ತಾತ್ಕಾಲಿಕಾಗಿ ದುರಸ್ತಿ ಮಾಡಲಾಗಿದೆ. ಈಗ ನಾಲೆಯಲ್ಲಿ 1,600 ಕ್ಯುಸೆಕ್ ನೀರು ಹರಿಯುತ್ತಿದೆ. ಮುಂದಿನ ಬೇಸಿಗೆಯಲ್ಲಿ ಶಾಶ್ವತ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ತುಂಗಾ ಮೇಲ್ದಂಡೆ ಯೋಜನೆಯ ಸಹಾಯಕ ಎಂಜಿನಿಯರ್ ಕೆ.ಎಂ.ಮಂಜುನಾಥ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.