ADVERTISEMENT

ವಿದ್ಯುತ್‌ ಕಂಪನಿ ಸೂಪರ್‌ವೈಸರ್ ಅನುಮಾನಾಸ್ವದ ಸಾವು

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 2:08 IST
Last Updated 23 ಜೂನ್ 2022, 2:08 IST

ಹರಿಹರ: ನಗರದ ಖಾಸಗಿ ಲಾಡ್ಜ್‌ವೊಂದರಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ವದವಾಗಿ ಮೃತಪಟ್ಟಿದ್ದಾರೆ.

ಜಗಳೂರು ಪಟ್ಟಣದ ರಂಗನಾಥ ಬಡಾವಣೆಯ ನಿವಾಸಿ ವಿದ್ಯುತ್‌ ಕಂಪನಿಯೊಂದರ ಸೂಪರ್‌ವೈಸರ್ ಭುವನೇಶ್ವರ ಕೆ.ವೈ. (46) ಮೃತಪಟ್ಟವರು.

ಸೋಮವಾರಲಾಡ್ಜ್‌ನಲ್ಲಿ ಇದ್ದಅವರು, ಕೊಠಡಿಯಲ್ಲಿ ಬಾಗಿಲು ಹಾಕಿಕೊಂಡಿದ್ದರು. ಬಹಳ ಹೊತ್ತು ಕೊಠಡಿ ಬಾಗಿಲು ತೆಗೆಯದಿರುವುದನ್ನು ಕಂಡ ಸಿಬ್ಬಂದಿ ಕುಟುಂಬದವರಿಗೆ ಮಾಹಿತಿ ನೀಡಿದ್ದರು. ಕುಟುಂಬದವರು ಬಂದು ಬಾಗಿಲು ತೆಗೆದು ನೋಡಿದಾಗ ಭುವನೇಶ್ವರ ಮೃತಪಟ್ಟಿದ್ದರು.

ADVERTISEMENT

‘ದಾವಣಗೆರೆಯ ವಿದ್ಯುತ್‌ ಕಂಪನಿಯೊಂದರ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದು, ಜಗಳೂರು ತಾಲ್ಲೂಕಿನಲ್ಲಿ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕೊಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.ನಾಗರಾಜು ಗೌಡ ಹಾಗೂ ಜಯಸಿಂಹ ಎಂಬುವವರು ನನ್ನ ಪತಿಗೆ ಕಿರುಕುಳ ನೀಡುತ್ತಿದ್ದರು. ಜಾತಿ ನಿಂದನೆಯೂ ಮಾಡುತ್ತಿದ್ದರು. ಇದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು. ಕಿರುಕುಳದ ಬಗ್ಗೆ ಡೆತ್‌ನೋಟ್‌ನಲ್ಲಿಯೂ ಬರೆದಿಟ್ಟಿದ್ದಾರೆ’ ಎಂದು ಭುವನೇಶ್ವರ ಪತ್ನಿ ಚೇತನ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.