ADVERTISEMENT

ದೇವಾಲಯ ನಿರ್ಮಾಣ ಧರ್ಮಕಾರ್ಯ

ಆರ್ಯವೈಶ್ಯ ಸಮಾಜದ ವಾಸವಿ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:19 IST
Last Updated 4 ಸೆಪ್ಟೆಂಬರ್ 2021, 3:19 IST
ಮಲೇಬೆನ್ನೂರು ಪಟ್ಟಣದ ಹೊರವಲಯದಲ್ಲಿರುವ ವೀರಭದ್ರೇಶ್ವರ ದೇವಾಲಯಕ್ಕೆ ಆರ್ಯವೈಶ್ಯ ಸಮಾಜದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಶುಕ್ರವಾರ ಭೇಟಿ ನೀಡಿ ಮಾಹಿತಿ ಪಡೆದರು.
ಮಲೇಬೆನ್ನೂರು ಪಟ್ಟಣದ ಹೊರವಲಯದಲ್ಲಿರುವ ವೀರಭದ್ರೇಶ್ವರ ದೇವಾಲಯಕ್ಕೆ ಆರ್ಯವೈಶ್ಯ ಸಮಾಜದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಶುಕ್ರವಾರ ಭೇಟಿ ನೀಡಿ ಮಾಹಿತಿ ಪಡೆದರು.   

ಮಲೇಬೆನ್ನೂರು: ಪಟ್ಟಣದ ಹೊರವಲಯದ ವೀರಭದ್ರೇಶ್ವರ ದೇವಾಲಯ ಶಿಲ್ಪಶಾಸ್ತ್ರ ವಿಜಯನಗರ ಸಾಮ್ರಾಜ್ಯ, ಹೊಯ್ಸಳ, ಚಾಲುಕ್ಯರ ಕಾಲದ ಶಿಲಾ ಸಂಸ್ಕೃತಿ ನೆನಪಿಸುತ್ತಿದೆ ಎಂದು ಬೆಂಗಳೂರಿನ ಆರ್ಯವೈಶ್ಯ ಸಮಾಜದ ವಾಸವಿ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಹೊರವಲಯದ ವೀರಭದ್ರೇಶ್ವರ, ಭದ್ರಕಾಳಿ, ಮಹಾಗಣಪತಿ, ನಾಗಪರಿವಾರ, ಕಾಲಭೈರವ ದೇಗುಲ ವೀಕ್ಷಿಸಿದ ಬಳಿಕ ಮಾತನಾಡಿದರು.

ದೊಡ್ಡ ದೊಡ್ಡ ಮಾಲ್‌ಗಳು, ಬೃಹತ್ ಕಟ್ಟಡಗಳಿಗೆ ಭವಿಷ್ಯವಿಲ್ಲ. ಆದರೆ, ಸನಾತನ ಪರಂಪರೆ ಸಾರುವ ಕಲ್ಲಿನ ದೇವಾಲಯ ಶಾಶ್ವತ. ದೇವಾಲಯ ಸಂಕೀರ್ಣದಲ್ಲಿನ ಸಭಾಂಗಣವು ಉತ್ಸವ, ಸಾಹಿತ್ಯ ಗೋಷ್ಠಿ, ಸಂಗೀತ, ಭರತನಾಟ್ಯ ಆಯೋಜಿಸಲು ಸೂಕ್ತ ಸ್ಥಳವಾಗಿದೆ ಎಂದು ಹೇಳಿದರು.

ADVERTISEMENT

ಆರ್ಯವೈಶ್ಯ ಸಮಾಜದ ನೂತನ ಸ್ವಾಮೀಜಿ ರಾಜ್ಯದ 21 ಜಿಲ್ಲೆಗಳಲ್ಲಿ ಸಮಾಜದ ಸಂಘಟನೆಗೆ ಪ್ರವಾಸ ಕೈಗೊಂಡಿದ್ದಾರೆ. ಪೀಠಕ್ಕೆ ಭಕ್ತರು ಶಕ್ತಿ ತುಂಬಬೇಕು ಎಂದು ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಆರುಣ್ ಕೋರಿದರು.

ವೀರಭದ್ರೇಶ್ವರ ದೇವಾಲಯ ಟ್ರಸ್ಟ್‌ನ ಬಿ. ಚಿದಾನಂದಪ್ಪ, ಆರ್ಯವೈಶ್ಯ ಸಮಾಜದ ಮುಖಂಡರಾದ ಭೂಪಾಳಂ ಶಶಿಧರ್, ಮುರುಳಿ, ಅಮರ್, ಜಿಗಳಿ, ಆರ್ಯವೈಶ್ಯ ಸಮಾಜದ ಮುಖಂಡರಾದ ಹನುಮಂತಶ್ರೇಷ್ಠಿ, ಶ್ರೀಪಾದ ಶ್ರೇಷ್ಠಿ, ಎಂ.ಕೆ. ರಾಮಶ್ರೇಷ್ಠಿ, ಮಹಾಬಲ ಶ್ರೇಷ್ಠಿ, ಟ್ರಸ್ಟ್‌ ಪದಾಧಿಕಾರಿಗಳಾದ ಬಿ. ನಾಗೇಶಣ್ಣ, ಉಮಾಶಂಕರ್, ಮಲ್ಲೇಶ್, ಹರ್ಷ, ಶಂಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.