ದಾವಣಗೆರೆ: ಇಲ್ಲಿನ ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಅವರ ಮನೆಯಲ್ಲಿ ಬುಧವಾರ ರಾತ್ರಿ ಕಳುವಾಗಿದೆ.
ಮನೆಯಲ್ಲಿದ್ದ ಬೆಳ್ಳಿಯ ಪೂಜೆಯ ಸಾಮಗ್ರಿಗಳನ್ನು ಕಳ್ಳರು ದೋಚಿದ್ದಾರೆ. ₹ 80 ಸಾವಿರ ಮೌಲ್ಯದ ಒಂದೂಕಾಲು ಕೆ.ಜಿಯ ಬೆಳ್ಳಿಯ ವಸ್ತುಗಳನ್ನು ಕಳ್ಳರು ಎಗರಿಸಿದ್ದಾರೆ.
ನಗರದ ಎಸ್.ಎಸ್ ಲೇಔಟ್ನ 6ನೇ ಕ್ರಾಸ್ನ ಮನೆಯ ಹಿಂಬದಿಯ ಬಾಗಿಲು ಮುರಿದ ಕಳ್ಳರು ಪೂಜೆಗೆ ಬಳಸುವ ದೀಪ ಸೇರಿ ಹಲವು ಬೆಳ್ಳಿ ವಸ್ತುಗಳನ್ನು ಕದ್ದಿದ್ದಾರೆ.
ಒಂದು ದಿನದ ಹಿಂದೆಯಷ್ಟೇ ಹೆಚ್ಚುವರಿ ಜಿಲ್ಲಾಧಿಕಾರಿಹೊಸ ಮನೆಗೆ ಕೆಲ ಸಾಮಗ್ರಿಗಳನ್ನು ಸಾಗಿಸಿ ಪೂಜೆ ನಡೆಸಿದ್ದರು. ಎಡಿಸಿ ಹಳೆಯ ಮನೆಯಲ್ಲೇ ಇದ್ದರು. ಇದನ್ನು ಗಮನಿಸಿದ ಕಳ್ಳರು ಕಳವು ಮಾಡಿದ್ದಾರೆ.
ಸ್ಥಳಕ್ಕೆ ವಿದ್ಯಾನಗರ ಪಿಎಸ್ಐ ರೂಪಾ ತೆಂಬದ್ ಭೇಟಿ ಪರಿಶೀಲನೆ ನಡೆಸಿದರು.
‘ಹೊಸ ಮನೆಗೆ ಹೋಗಲು ಎಡಿಸಿ ಕೆಲ ವಸ್ತುಗಳನ್ನು ಮಾತ್ರ ಸಾಗಿಸಿದ್ದರು. ಹೀಗಾಗಿ ಬೆಳ್ಳಿ ವಸ್ತುಗಳನ್ನು ಮಾತ್ರ ಕಳ್ಳರು ಕದ್ದಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪಿಎಸ್ಐರೂಪಾ ತೆಂಬದ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.