ADVERTISEMENT

ದಾವಣಗೆರೆ: ಪತ್ನಿ ಹಾಗೂ ಮಗನಿಗೆ ವಿಷ ಕುಡಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 5:20 IST
Last Updated 20 ಸೆಪ್ಟೆಂಬರ್ 2021, 5:20 IST

ದಾವಣಗೆರೆ: ಇಲ್ಲಿನ ಭರತ್ ಕಾಲೊನಿಯಲ್ಲಿ ಪತ್ನಿಯ ಅನಾರೋಗ್ಯದಿಂದ ಬೇಸತ್ತ ಪತಿಯೊಬ್ಬರು ಪತ್ನಿ ಹಾಗೂ ಮಗನಿಗೆ ವಿಷ ಕುಡಿಸಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಲಾರಿ ಚಾಲಕ ಕೃಷ್ಣನಾಯ್ಕ (35) ಪತ್ನಿ ಸುಮಾ (30) ಹಾಗೂ ಧ್ರುವ (6) ಮೃತಪಟ್ಟವರು.

ಸುಮಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಭರಿಸಲು ಆಗದೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ADVERTISEMENT

ಸ್ಥಳಕ್ಕೆ ಆರ್‌ಎಂಸಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.