ADVERTISEMENT

ಚಕ್ರ ಎಸೆತದಲ್ಲಿ ರಾಷ್ಟ್ರಮಟ್ಟಕ್ಕೆ ವಿದ್ಯಾ ಆಯ್ಕೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 12:32 IST
Last Updated 8 ಡಿಸೆಂಬರ್ 2018, 12:32 IST
ಚಕ್ರ ಎಸೆತದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾ ಹಾಗೂ ಪೋಷಕರನ್ನು ಅವರನ್ನು ಹರಪನಹಳ್ಳಿಯಲ್ಲಿ ಶನಿವಾರ ಮೆರವಣಿಗೆ ಮಾಡಲಾಯಿತು
ಚಕ್ರ ಎಸೆತದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾ ಹಾಗೂ ಪೋಷಕರನ್ನು ಅವರನ್ನು ಹರಪನಹಳ್ಳಿಯಲ್ಲಿ ಶನಿವಾರ ಮೆರವಣಿಗೆ ಮಾಡಲಾಯಿತು   

ಹರಪನಹಳ್ಳಿ: ರಾಜ್ಯ ಮಟ್ಟದ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ತಾಲ್ಲೂಕಿನ ಪರ್ಲ್ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಕೆ. ವಿದ್ಯಾ ಅವರನ್ನು ವಿವಿಧ ಸಂಘ-ಸಂಸ್ಥೆಗಳು ಹಾಗೂ ಶಾಲೆಯ ವತಿಯಿಂದ ಶನಿವಾರ ಸನ್ಮಾನಿಸಿ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಗೆ ಪಟ್ಟಣದ ತೆಗ್ಗಿನಮಠದಲ್ಲಿ ವರಸದ್ಯೋಜಾತ ಶ್ರೀ ಚಾಲನೆ ನೀಡಿದರು. ಹೊಸ ಬಸ್ ನಿಲ್ದಾಣ, ಶಿರಿಸಪ್ಪ ಇಜಾರಿ ವೃತ್ತ, ಹಳೇ ಬಸ್ ನಿಲ್ದಾಣ ಮೂಲಕ ಐಬಿ ವೃತ್ತದವರಿಗೆ ಮೆರವಣಿಗೆ ನಡೆಸಲಾಯಿತು.

ತುಮಕೂರಿನಲ್ಲಿ ಸ್ಕೂಲ್ ಗೌರ್ವಮೆಂಟ್ ಫೆಡರೇಶನ್ ವತಿಯಿಂದ ಈಚೆಗೆ ನಡೆದ ಪಂದ್ಯಾವಳಿಯ ಚಕ್ರ ಎಸೆತ ವಿಭಾಗದಲ್ಲಿ ಕೆ. ವಿದ್ಯಾ 27.4 ಮೀಟರ್ ಚಕ್ರ ಎಸೆಯುವ ಮೂಲಕ ಹರ್ಯಾಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.

ADVERTISEMENT

ಪ್ರಕೃತಿ ಶಿಕ್ಷಣ ಸಂಸ್ಥೆಯ ಚೇರಮನ್ ಕೆ.ವಿರೂಪಾಕ್ಷಪ್ಪ, ಪ್ರಾಚಾರ್ಯ ಸುಮಾ ಉಪ್ಪಿನ್, ಕಾರ್ಯದರ್ಶಿ ನಾಗೇಶ್ ಉಪ್ಪಿನ್, ನಿರ್ದೇಶಕ ಶಶಿಧರ ಪೂಜಾರ, ಪೂಜಾರ ಮಂಜುನಾಥ್, ಬಸವರಾಜ ಹುಲ್ಲತ್ತಿ, ಡಿ.ಚನ್ನೇಶ್, ಮಾಲತೇಶ್ ಚಳಿಗೇರಿ, ಗಿರೀಶ್, ದೈಹಿಕ ಶಿಕ್ಷಣ ಶಿಕ್ಷಕ ಜಯಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.