ADVERTISEMENT

ವಕ್ಫ್‌ ಮಂಡಳಿ ಅಧಿಕಾರಿಗಳ ಧೋರಣೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 7:26 IST
Last Updated 27 ಮಾರ್ಚ್ 2018, 7:26 IST
ಧಾರವಾಡದಲ್ಲಿರುವ ಜಿಲ್ಲಾ ವಕ್ಫ್‌ ಕಚೇರಿ ಎದುರು ಮುಸ್ಲಿಂ ಮುಖಂಡರು ಸೋಮವಾರ ಧರಣಿ ನಡೆಸಿದರು
ಧಾರವಾಡದಲ್ಲಿರುವ ಜಿಲ್ಲಾ ವಕ್ಫ್‌ ಕಚೇರಿ ಎದುರು ಮುಸ್ಲಿಂ ಮುಖಂಡರು ಸೋಮವಾರ ಧರಣಿ ನಡೆಸಿದರು   

ಧಾರವಾಡ: ನವಲಗುಂದ ಅಂಜುಮನ್ ಇಸ್ಲಾಂ ಸಂಸ್ಥೆಯ ಶಾದಿ ಮಹಲ್ ಕಟ್ಟಡವನ್ನು ಕಾನೂನುಬಾಹಿರವಾಗಿ ನಿರ್ಮಾಣ ಮಾಡಲು ಅವಕಾಶ ಮಾಡಿಕೊಟ್ಟ ಜಿಲ್ಲಾ ವಕ್ಫ್ ಮಂಡಳಿ ಅಧಿಕಾರಿಗಳ ಧೋರಣೆ ಖಂಡಿಸಿ ಮುಸ್ಲಿಂ ಸಮುದಾಯದವರು ಧಾರವಾಡದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ವಕ್ಫ್ ಕಚೇರಿ ಎದುರು ಪ್ರತಿಭಟಿಸಿದ ಮುಖಂಡರು, ‘ಕಳೆದ ಏಳು ವರ್ಷಗಳಿಂದ ಚುನಾವಣೆ ನಡೆದಿಲ್ಲ. ಶಾದಿ ಮಹಲ್‌ಗೆ ಈ ಹಿಂದೆ ₹30 ಲಕ್ಷ ಬಿಡುಗಡೆಯಾಗಿತ್ತು. ಆದರೆ, ಕಾಮಗಾರಿ ಅರ್ಧದಲ್ಲೇ ನಿಂತಿದೆ. ಪೂರ್ಣಗೊಳ್ಳಲು ಇನ್ನೂ ₹30 ಲಕ್ಷ ಅಗತ್ಯವಿದೆ. ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ಕಾನೂನುಬಾಹಿರವಾಗಿ ಕೊಳ್ಳೆಹೊಡೆಯಲು ಕೆಲವರು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

‘ಅಂಜುಮನ್ ಸಂಸ್ಥೆಗೆ ಚುನಾವಣೆ ನಡೆಸಬೇಕು. ಈಗ ನೇಮಿಸಿರುವ ಅಡಹಾಕ್ ಕಮಿಟಿಯನ್ನು ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಎಂ.ಬಿ. ಮುಲ್ಲಾ, ಖಾಜಾಸಾಬ ಹಂಚಿನಾಳ, ರಾಜೇಸಾಬ ಜಾಲಿಹಾಳ, ರಿಯಾಜ್ ನಾಶಿಪುಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.