ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಇಂದ್ರಪ್ರಸ್ತ ನಗರದ ಭರತ ರಾಮಚಂದ್ರ ಸೂರ್ಯವಂಶಿ ಎಂಬುವರ ಮನೆಯಲ್ಲಿ ಬುಧವಾರ ಮಧ್ಯರಾತ್ರಿ ಸುಮಾರು ₹8 ಲಕ್ಷ ಮೌಲ್ಯದ 18 ತೊಲೆ ಚಿನ್ನಾಭರಣಕಳ್ಳತನವಾಗಿದೆ.
ಕಿಟಕಿಯಿಂದ ಕೈಹಾಕಿ ಹಿಂಬಾಗಿಲು ತೆರೆದು ಒಳನುಗ್ಗಿ ಅಲ್ಮೇರಾದಲ್ಲಿದ್ದ ಆಭರಣ ಮತ್ತು ₹300 ನಗದು ದೋಚಿ ಪರಾರಿಯಾಗಿದ್ದಾರೆ. ಸೂರ್ಯವಂಶಿ ಅವರು ಹರ್ಷ ಕಾಂಪ್ಲೆಕ್ಸ್ನಲ್ಲಿ ರೇಡಿಯಂ ಅಂಗಡಿ ಹೊಂದಿದ್ದಾರೆ. ಬೆಳಿಗ್ಗೆ ಎದ್ದು ನೋಡಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ತಿಳಿದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಬೈಲ್ ಕಳವು: ಹಳೇ ಹುಬ್ಬಳ್ಳಿಯ ನಾಗಲಿಂಗ ನಗರದ ಗಿರೀಶ ಶಿಂಧೆ ಮತ್ತು ರಾಜೇಶ ಪವಾರ್ ಎಂಬುವರ ಮನೆಯಲ್ಲಿ ತಲಾ ₹15 ಸಾವಿರ ಮೌಲ್ಯದ ಎರಡು ಮೊಬೈಲ್ಗಳು ಕಳ್ಳತನವಾಗಿವೆ. ಕಳ್ಳರು ಕಿಟಕಿಯಲ್ಲಿ ಕೈ ಹಾಕಿ ಮೊಬೈಲ್ ಫೋನ್ಗಳನ್ನು ದೋಚಿದ್ದಾರೆ.
ಬಂಧನ: ಬಿಡ್ನಾಳ ಕ್ರಾಸ್ನ ಪಿ.ಬಿ. ರಸ್ತೆಯಲ್ಲಿರುವ ಎ.ಕೆ ಸ್ಟೀಲ್ ಕಾರ್ಪೋರೇಷನ್ ಅಂಗಡಿಯ ಹಿಂಭಾಗದ ಗೋಡೆ ಒಡೆದು 13 ಸ್ಟೀಲ್ ಕ್ವಾಯಿಲ್ಗಳನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಡಿಗೇರಿ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜೂನ್ 19ರಂದು ನಡೆದಿದ್ದ ಈ ಘಟನೆಯಲ್ಲಿ ಆರೋಪಿಗಳು ₹1.08 ಲಕ್ಷ ಮೌಲ್ಯದಕ್ವಾಯಿಲ್ಗಳನ್ನು ಕದ್ದಿದ್ದರು. ಕೃತ್ಯಕ್ಕೆ ಬಳಸಿದ್ದ ಟಾಟಾ ಏಸ್ ವಾಹನ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.