ಹುಬ್ಬಳ್ಳಿ: ಇಲ್ಲಿನ ಭವಾನಿ ನಗರದ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ಎರಡು ಸಂಘಟನೆಗಳಿಂದ ಪ್ರತ್ಯೇಕವಾಗಿ ನಡೆದ ರಕ್ತದಾನ ಶಿಬಿರದಲ್ಲಿ 906 ಮಂದಿ ರಕ್ತದಾನ ಮಾಡಿದರು. 106 ಜನರು ನೇತ್ರದಾನ ಮಾಡುವ ವಾಗ್ದಾನ ಮಾಡಿದರು.
ಸುಜಯಿಂದ್ರ ಸಭಾಭವನದಲ್ಲಿ ಬ್ರಾಹ್ಮಣ ಸಮಾಜ, ರಾಷ್ಟ್ರೋತ್ಥಾನ ರಕ್ತಕೇಂದ್ರ ಹಾಗೂ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ ನಡೆಯಿತು. ಎ.ಸಿ. ಗೋಪಾಲ, ಲಕ್ಷ್ಮಣರಾವ್ ಓಕ್, ಪ್ರತಿಭಾ ನಂದಕುಮಾರ್, ವಸಂತ ನಾಡಜೋಶಿ, ಸಂಜೀವ ಜೋಶಿ, ಡಾ. ಬಿ.ಬಿ. ಪಾಟೀಲ, ದತ್ತಮೂರ್ತಿ ಕುಲಕರ್ಣಿ, ರವಿನಾಯ್ಕ, ಮುರಳಿ ಕರ್ಜಗಿ, ಸುನೀಲ್ ಗುಮಾಸ್ತೆ ಇದ್ದರು.
ಪಿಕೆಎಸ್ ಫೌಂಡೇಷನ್ ಹಾಗೂ ಕೆ.ಎಚ್. ಪಟ್ವಾ ಫೌಂಡೇಷನ್ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ಪ್ರಸಾದ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ವಿನೋದ್ಕುಮಾರ್ ಪಿ. ಪಟ್ವಾ, ಸಂಜಯ್ ನಾಯಕ್, ಕಿಶನ್ ಕಟಾರಿಯಾ, ಅಂಕಿತ ಬಗ್ರೆಚ, ಗೌರವ ಜೈನ್, ಮಿತುನ್ ದೇವಾಡಿಗ, ಬಸವರಾಜ ಬೆಳಗಾವಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.