ನವಲಗುಂದ: ಇಲ್ಲಿನ ಯಮನೂರ ರಸ್ತೆಯಲ್ಲಿರುವ ನ್ಯೂಸಾಗರ ಡಾಬಾದಲ್ಲಿ ಶನಿವಾರ ಕಾಣಿಸಿಕೊಂಡಿದ್ದ ಅಂದಾಜು 7 ಅಡಿ ಉದ್ದದ ಕೆರೆ ಹಾವನ್ನು ಉರಗ ರಕ್ಷಕ ಪ್ರಕಾಶ ಚಿಗರಿ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟರು.
ಡಾಬಾದಲ್ಲಿ ಪ್ರತ್ಯಕ್ಷವಾಗಿದ್ದ ಹಾವನ್ನು ಕಂಡು ಸಿಬ್ಬಂದಿ ಹಾಗೂ ಗ್ರಾಹಕರು ಗಾಬರಿಗೊಂಡಿದ್ದರು. ಡಾಬಾದ ಮಾಲೀಕರು ಕೂಡಲೇ ಪ್ರಕಾಶ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಬಂದ ಅವರು ಹಾವನ್ನು ಹಿಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.