ADVERTISEMENT

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹೊಲದಲ್ಲಿ ಅಯ್ಯಪ್ಪಸ್ವಾಮಿ ಮೂರ್ತಿ!

​ಪ್ರಜಾವಾಣಿ ವಾರ್ತೆ
Published 1 ಜನವರಿ 2025, 15:44 IST
Last Updated 1 ಜನವರಿ 2025, 15:44 IST
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹೊಲದಲ್ಲಿ ಅಯ್ಯಪ್ಪಸ್ವಾಮಿ ಮೂರ್ತಿಗೆ ಮಾಲಾಧಾರಾರಿಗಳು ನಮಿಸಿದರು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹೊಲದಲ್ಲಿ ಅಯ್ಯಪ್ಪಸ್ವಾಮಿ ಮೂರ್ತಿಗೆ ಮಾಲಾಧಾರಾರಿಗಳು ನಮಿಸಿದರು.    

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಮಾವಿನ ತೋಪಿನ ಕಟ್ಟೆಯ ಮೇಲೆ ಅಯ್ಯಪ್ಪಸ್ವಾಮಿ ಮೂರ್ತಿಯನ್ನು ಅಪರಿಚಿತರು  ತಂದಿಟ್ಟಿದ್ದು, ಗೊಂದಲಕ್ಕೀಡು ಮಾಡಿದೆ. ಕೆಲ ಮಾಲಾಧಾರಿಗಳು ಬುಧವಾರ ಮೂರ್ತಿಗೆ ನಮಿಸಿದರು.

‘ಮೂರ್ತಿಯನ್ನು ಯಾರು, ಯಾವಾಗ ತಂದಿಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಪೊಲೀಸರಿಗೆ ದೂರು ನೀಡಿದ್ದೇವೆ. ಪೊಲೀಸರು ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸುತ್ತೇವೆ’ ಎಂದು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಪ್ರೊ.ಬಿ.ಡಿ.ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೂರ್ತಿಯನ್ನು ಶಾಸ್ತ್ರೋಕ್ತವಾಗಿ ಉತ್ತರಾಭಿಮುಖವಾಗಿ ಇಡಲಾಗಿದೆ. ಯಾರೋ ವ್ಯವಸ್ಥಿತವಾಗಿ ಈ ಕಾರ್ಯ ಮಾಡಿದ್ದಾರೆ’ ಎಂದು ಎತ್ತಿನಗುಡ್ಡ ಗ್ರಾಮಸ್ಥ ನಾಗೇಶ ತಿಳಿಸಿದರು.

ADVERTISEMENT
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹೊಲದಲ್ಲಿನ ಅಯ್ಯಪ್ಪಸ್ವಾಮಿ ಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.