ಹುಬ್ಬಳ್ಳಿ: ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆಮಹಾನಗರ ಪಾಲಿಕೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿದರು.
ಜನಾತಾ ಬಜಾರ್ ಸುತ್ತಮುತ್ತಲಿನ ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳು ಸೇರಿದಂತೆ, ಸುಮಾರು 60 ಕಡೆ ದಾಳಿ ನಡೆಸಿದ ಅಧಿಕಾರಿಗಳು 10 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು, ₹8 ಸಾವಿರ ದಂಡ ವಿಧಿಸಿದರು.
ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಬೆಂಗಳೂರು ವಲಯದ ಹಿರಿಯ ಪರಿಸರ ಎಂಜಿನಿಯರ್ ವಿವೇಕ್ ಕೆ., ಪಾಲಿಕೆಯ ಇಇ ಸಂತೋಷಕುಮಾರ್ ಯರಂಗಳಿ, ಪರಿಸರ ಎಂಜಿನಿಯರ್ಗಳಾದ ಸೋಮಶೇಖರ ಹಿರೇಗೌಡರ, ಜ್ಯೋತಿ ಬಿ.ಎಚ್., ನಾಝಿಯಾ ಇಫತ್, ಹಿರಿಯ ಆರೋಗ್ಯ ನಿರೀಕ್ಷಕರಾದ ಯಲ್ಲಪ್ಪ ಯರಗುಂಟಿ, ಮಲ್ಲಿಕಾರ್ಜುನ ಕುದರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.