ADVERTISEMENT

ಬಿಡಿಕೆ ತಂಡಕ್ಕೆ ಚಾಂಪಿಯನ್‌ ಪಟ್ಟ

14 ವರ್ಷದೊಳಗಿನವರ ಕ್ರಿಕೆಟ್‌: ಅಬ್ದುಲ್‌ ಸಮಿ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 15:17 IST
Last Updated 20 ಡಿಸೆಂಬರ್ 2020, 15:17 IST
ಹುಬ್ಬಳ್ಳಿಯಲ್ಲಿ ನಡೆದ 14 ವರ್ಷದ ಒಳಗಿನವರ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ತಂಡ. ನಿಂತವರು, ಎಡದಿಂದ: ರೋಹಿತ್‌ ಹಿರೇಸೀಮಿ, ಗಣೇಶ ಮಡ್ಡಿಮನಿ, ಸಂಕಲ್ಪ ತೆಗ್ಗಿಹಳ್ಳಿ, ಪ್ರಭಂಜನ್‌ ಬಾಗಲ್‌, ವಿನಾಯಕ ಪಾಂಡೆ, ಅಬ್ದುಲ್‌ಸಮಿ ದಿವಾನ್‌ ಅಲಿ, ಎ.ಜಿ. ಕಾರ್ತಿಕ್‌, ವಿಶಾಲ್‌ ಡೊಂಗ್ರಿ, ಅದ್ವಿತ್‌ ಕನೊಜಿ, ಸೌರಭ್‌ ಗುಡಿ. ಕುಳಿತವರು: ಭುವನ ಬಿಸಿಡೋಣಿ (ನಾಯಕ), ವಿನಾಯಕ ಗುಡಿ, ಅಬ್ದುಲ್‌ ಸೈಯದ್‌, ಜಯರಾಯ್‌ ನೂಲ್ವಿ (ತರಬೇತುದಾರರು), ಅಮಿತ್ ಭೂಸದ, ಬಾಬಾ ಭೂಸದ (ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ಟ್ರಸ್ಟಿ), ಶಿವಾನಂದ ಗುಂಜಾಳ, ನಿಖಿಲ್‌ ಭೂಸದ. ಮಂಡಿಯೂರಿ ಕುಳಿತವರು: ಧನುಷ್‌, ಪಿಯುಷ್‌ ಮಹಾಜನ್‌, ವಿವಾನ್‌ ಭೂಸದ ಮತ್ತು ಸುಹಾಸ ಮಮದಾಪುರ –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ನಡೆದ 14 ವರ್ಷದ ಒಳಗಿನವರ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ತಂಡ. ನಿಂತವರು, ಎಡದಿಂದ: ರೋಹಿತ್‌ ಹಿರೇಸೀಮಿ, ಗಣೇಶ ಮಡ್ಡಿಮನಿ, ಸಂಕಲ್ಪ ತೆಗ್ಗಿಹಳ್ಳಿ, ಪ್ರಭಂಜನ್‌ ಬಾಗಲ್‌, ವಿನಾಯಕ ಪಾಂಡೆ, ಅಬ್ದುಲ್‌ಸಮಿ ದಿವಾನ್‌ ಅಲಿ, ಎ.ಜಿ. ಕಾರ್ತಿಕ್‌, ವಿಶಾಲ್‌ ಡೊಂಗ್ರಿ, ಅದ್ವಿತ್‌ ಕನೊಜಿ, ಸೌರಭ್‌ ಗುಡಿ. ಕುಳಿತವರು: ಭುವನ ಬಿಸಿಡೋಣಿ (ನಾಯಕ), ವಿನಾಯಕ ಗುಡಿ, ಅಬ್ದುಲ್‌ ಸೈಯದ್‌, ಜಯರಾಯ್‌ ನೂಲ್ವಿ (ತರಬೇತುದಾರರು), ಅಮಿತ್ ಭೂಸದ, ಬಾಬಾ ಭೂಸದ (ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ಟ್ರಸ್ಟಿ), ಶಿವಾನಂದ ಗುಂಜಾಳ, ನಿಖಿಲ್‌ ಭೂಸದ. ಮಂಡಿಯೂರಿ ಕುಳಿತವರು: ಧನುಷ್‌, ಪಿಯುಷ್‌ ಮಹಾಜನ್‌, ವಿವಾನ್‌ ಭೂಸದ ಮತ್ತು ಸುಹಾಸ ಮಮದಾಪುರ –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ (ಎಚ್‌ಸಿಎ) ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ್ದ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ’ಸ್ಕೈ 360’ ಸಲ್ಯೂಷನ್‌ 14 ವರ್ಷದೊಳಗಿನವರ ಅಂತರ ಕ್ಯಾಂಪ್‌ಗಳ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಆರು ವಿಕೆಟ್‌ಗಳ ಗೆಲುವು ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಫಸ್ಟ್‌ ಕ್ರಿಕೆಟ್ ಅಕಾಡೆಮಿ ಜಿಮ್ಖಾನಾ ಮೈದಾನದಲ್ಲಿ ಆಯೋಜಿಸಿದ್ದ ಟೂರ್ನಿಯಲ್ಲಿ ಭಾನುವಾರ ಟಾಸ್ ಗೆದ್ದು ಬ್ಯಾಟ್‌ ಮಾಡಿದ ಎಚ್‌ಸಿಎ ತಂಡ ನಿಗದಿತ 30 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 125 ರನ್‌ ಗಳಿಸಿತು. ಈ ತಂಡದ ಅನ್ಮೋಲ್‌ ಪಗಾಡ್‌ (41) ಗರಿಷ್ಠ ಸ್ಕೋರರ್‌ ಎನಿಸಿದರು. ಬಿಡಿಕೆ ತಂಡದ ಭುವನ್ ಬಿಸಿಡೋಣಿ ಎರಡು ವಿಕೆಟ್‌ ಉರುಳಿಸಿದರು.‌ ಬಿಡಿಕೆ ತಂಡ 23 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಅಬ್ದುಲ್‌ ಸಮಿ ದಿವಾನ್‌ಅಲಿ (58, 45ಎಸೆತ, 11ಬೌಂಡರಿ) ಮತ್ತು ರೋಹಿತ್‌ ಎಂ. ಯರೇಸೀಮಿ (22) ಮೊದಲ ವಿಕೆಟ್‌ಗೆ 61 ರನ್‌ ಕಲೆಹಾಕಿ ಗೆಲುವಿನ ಹಾದಿ ಸುಗಮ ಮಾಡಿದರು.

ವೈಯಕ್ತಿಕ ಪ್ರಶಸ್ತಿ: ತೇಜಲ್‌ ಶಿರಗುಪ್ಪಿ ಕ್ರಿಕೆಟ್‌ ಅಕಾಡೆಮಿಯ ಪ್ರೀತಮ್‌ ಹುಲಕೊಪ್ಪ (ಅತ್ಯುತ್ತಮ ವಿಕೆಟ್‌ ಕೀಪರ್‌), ಬಿಡಿಕೆ ಸ್ಪೋರ್ಟ್ಸ್‌ ಫೌಂಡೇಷನ್‌ನ ಭುವನ ಬಿಸಿಡೋಣಿ (ಅತ್ಯುತ್ತಮ ಬೌಲರ್‌), ಇದೇ ತಂಡದ ರೋಹಿತ್‌ ಯರೇಸೀಮಿ (ಅತ್ಯುತ್ತಮ ಬ್ಯಾಟ್ಸ್‌ಮನ್‌) ಮತ್ತು ಎಚ್‌ಸಿಎ ತಂಡದ ಆದಿತ್ಯ ಉಮ್ರಾಣಿ (ಅತ್ಯುತ್ತಮ ಆಲ್‌ರೌಂಡರ್‌) ವೈಯಕ್ತಿಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

ADVERTISEMENT

ಸ್ವರ್ಣ ಗ್ರೂಪ್‌ನ ಡಾ.ವಿ.ಎಸ್‌.ವಿ. ಪ್ರಸಾದ ಮಾತನಾಡಿ ’ಈಗಿನ ಮಕ್ಕಳಲ್ಲಿ ಉತ್ತಮ ಪ್ರತಿಭೆಯಿದ್ದು, ಭವಿಷ್ಯದಲ್ಲಿ ಭಾರತ ತಂಡ ಮತ್ತು ಐಪಿಎಲ್‌ನಲ್ಲಿ ಮಿಂಚಬೇಕು‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.