ADVERTISEMENT

ರಸ್ತೆ ಗುಂಡಿಗಳಲ್ಲಿ ದೋಣಿ ಸ್ಪರ್ಧೆ!

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 6:38 IST
Last Updated 12 ಅಕ್ಟೋಬರ್ 2020, 6:38 IST
   

ಹುಬ್ಬಳ್ಳಿ: ನಗರದಲ್ಲಿ ಹದಗೆಟ್ಟಿರುವ ಹಾಗೂ ಗುಂಡಿಗಳೇ ತುಂಬಿರುವ ರಸ್ತೆಗಳಲ್ಲಿ ಕಾಂಗ್ರೆಸ್ ನ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಯೂತ್ ಘಟಕದ ವತಿಯಿಂದ ಮಕ್ಕಳಿಗೆ ದೋಣಿ ಬಿಡುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ನ್ಯೂ ‌ಕಾಟನ್ ಮಾರ್ಕೆಟ್ ರಸ್ತೆಯಲ್ಲಿ ಬಹಳಷ್ಟು ಗುಂಡಿಗಳು ಬಿದ್ದಿವೆ. ಇದನ್ನು ಪ್ರತಿಭಟಿಸಲು ಕಾಂಗ್ರೆಸ್ ಈ ಸ್ಪರ್ಧೆ ಆಯೋಜಿಸಿದೆ.

ಹತ್ತಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಮಕ್ಕಳು ಹಾಳೆಯ ದೋಣಿಗಳನ್ನು ಬಿಟ್ಟು ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಬ್ಯೂಸಿಯಾಗಿದ್ದಾರೆ ಎನ್ನುವ ಸಂದೇಶ ಬರೆದು ಸಚಿವ ಜಗದೀಶ ಶೆಟ್ಟರ್ ಅವರ ಚಿತ್ರವನ್ನು ಬಿಡಿಸಿದ್ದಾರೆ. ಶೆಟ್ಟರ್ ಮಲಗಿರುವ ಹಾಗೂ ಆರಾಮವಾಗಿ ಖುರ್ಚಿ ಮೇಲೆ ಕುಳಿತ ಚಿತ್ರಗಳ ಪೇಪರ್ ಗಳನ್ನು ದೋಣಿ ಮಾಡಿ ರಸ್ತೆಯಲ್ಲಿ ಬಿದ್ದ ಗುಂಡಿಗಳಲ್ಲಿ ‌ನಿಂತಿರುವ ಮಳೆಯ‌ ನೀರಿನಲ್ಲಿ ದೋಣಿಗಳನ್ನು ಹರಿಯ ಬಿಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.