ADVERTISEMENT

ಮರ ಕಡಿದ ಮೂವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 6:29 IST
Last Updated 12 ನವೆಂಬರ್ 2020, 6:29 IST
ಜಿಲ್ಲಾ ಪಂಚಾಯಿತಿ ಎದುರು ಕಡಿದಿರುವುದು.
ಜಿಲ್ಲಾ ಪಂಚಾಯಿತಿ ಎದುರು ಕಡಿದಿರುವುದು.   

ದಾವಣಗೆರೆ: ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಮಂಗಳವಾರ 10 ಮರಗಳನ್ನು ಕಡಿದಿದ್ದು, ಈ ಸಂಬಂಧ ಗುತ್ತಿಗೆದಾರ ಸೇರಿ ಮೂವರ ವಿರುದ್ಧ ಬುಧವಾರ ಪ್ರಕರಣ ದಾಖಲಾಗಿದೆ.

7 ಸಣ್ಣ ಹಾಗೂ ಮೂರು ದೊಡ್ಡ ಮರ (ಮಳೆ ಮರ) ಗಳನ್ನು ಕಡಿಯಲಾಗಿದ್ದು, ಈ ಸಂಬಂಧ ಗುತ್ತಿಗೆದಾರ ಸಾಗರ್ ಹಾಗೂ ಕಾರ್ಮಿಕರಾದ ಶ್ರೀನಿವಾಸ್, ಎಲ್‌.ವಿ. ಮಂಜುನಾಥ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಜಿಲ್ಲಾ ಪಂಚಾಯಿತಿ ಬಳಿ ಶೌಚಾಲಯ ಸೇರಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಮರ ಕಡಿಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

'ಇಲಾಖೆಯ ಅನುಮತಿ ಇಲ್ಲದೇ ಮರಗಳನ್ನು ಕಡಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಇನ್ನೂ ಕೆಲವು ಮರಗಳನ್ನು ಕಡಿಯಲು ಅನುಮತಿ ಕೇಳಿದ್ದು, ಪರಿಶೀಲಿಸಿ ಅನುಮತಿ ಕೊಡುತ್ತೇವೆ' ಎಂದು ಡಿಆರ್‌‌ಎಫ್ಒ ದಿನೇಶ್ ತಿಳಿಸಿದರು.

‘ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಹೇಳಿದ್ದಾರೆ ಎಂದು ಕೆಲಸಗಾರರು ಮರ ಕಡಿದಿದ್ದಾರೆ. ಅವರು ಮರ ಕಡಿದಿದ್ದಾರೆ. ಮರ ಕಡಿದ ಮೇಲೆ ಅನುಮತಿ ನೀಡಿ ಎಂದು ಕೇಳುವುದು ಯಾವ ನ್ಯಾಯ? ಮೊದಲು ಆ ಎಂಜಿನಿಯರ್‌ಗೆ ದಂಡ ಹಾಕಬೇಕು’ ಎಂಬುದು ಪರಿಸರ ಪ್ರೇಮಿ ಕೆ.ಟಿ. ಗೋಪಾಲಗೌಡ ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.